ನವದೆಹಲಿ: ಮೋದಿ ಸರ್ಕಾರ ಚೀನಾ ಮತ್ತು ಪಾಕಿಸ್ಥಾನವನ್ನು ಒಗ್ಗೂಡಿಸಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಯ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಮತ್ತು ಉನ್ನತ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿ, “ಮಾಜಿ ರಾಷ್ಟ್ರಪತಿ ದಿವಂಗತ ಶ್ರೀ ಪ್ರಣಬ್ ಮುಖರ್ಜಿ ಅವರು ಚೀನಾದ ಬಗ್ಗೆ ಏನು ಟೀಕಿಸಿದ್ದರು ಎಂಬುದು ಬಹುಶಃ ನಕಲಿ ಗಾಂಧಿಗೆ ತಿಳಿದಿಲ್ಲ” ಎಂದಿದ್ದಾರೆ.
“ಕಾಂಗ್ರೆಸ್ ಪಾಕಿಸ್ಥಾನ ಮತ್ತು ಚೀನಾಕ್ಕೆ ಪ್ರದೇಶಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೇಗೆ ಪ್ರಮಾದ ಎಸಗಿದೆ ತಿಳಿದಿದಲ್ಲವೆ” ಎಂದಿದ್ದಾರೆ.
ಜೈಶಂಕರ್ ಅವರು ಟ್ವಿಟ್ ಮಾಡಿ, “1970 ರ ದಶಕದಿಂದ ಚೀನಾ ಮತ್ತು ಪಾಕಿಸ್ಥಾನ ನಿಕಟ ಪರಮಾಣು ಸಹಯೋಗವನ್ನು ಹೊಂದಿದ್ದವು. 2013 ರಲ್ಲಿ, ಚೀನಾ-ಪಾಕಿಸಾಥಬ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು. ಹಾಗಾದರೆ, ನಿಮ್ಮನ್ನು ಕೇಳಿಕೊಳ್ಳಿ: ಆಗ ಚೀನಾ ಮತ್ತು ಪಾಕಿಸ್ಥಾನ ದೂರ ದೂರವಿತ್ತೆ?” ಎಂದಿದ್ದಾರೆ.
“ಪಾಕಿಸ್ಥಾನ ಮತ್ತು ಚೀನಾವನ್ನು ಒಟ್ಟಿಗೆ ತಂದದ್ದು ಇದೇ ಸರ್ಕಾರ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದರು. ಬಹುಶಃ ಕೆಲವು ಇತಿಹಾಸದ ಪಾಠಗಳು ಕ್ರಮಬದ್ಧವಾಗಿವೆ: 1963 ರಲ್ಲಿ ಪಾಕಿಸ್ಥಾನವು ಶಾಕ್ಸ್ಗಾಮ್ ಕಣಿವೆಯನ್ನು ಚೀನಾಕ್ಕೆ ಅಕ್ರಮವಾಗಿ ಹಸ್ತಾಂತರಿಸಿತು. 1970 ರ ದಶಕದಲ್ಲಿ ಚೀನಾ ಪಿಒಕೆ ಮೂಲಕ ಕಾರಕೋರಂ ಹೆದ್ದಾರಿಯನ್ನು ನಿರ್ಮಿಸಿತು” ಎಂದಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಪರೇಡ್ಗೆ ಯಾವುದೇ ವಿದೇಶಿ ಅತಿಥಿ ಇರಲಿಲ್ಲ ಎಂಬ ರಾಹುಲ್ ಟೀಕೆಗಳಿಗೆ ಉತ್ತರಿಸಿದ ಡಾ ಜೈಶಂಕರ್, “ಭಾರತದಲ್ಲಿ ವಾಸಿಸುವವರಿಗೆ ನಾವು ಕೊರೋನಾ ಅಲೆಯ ಮಧ್ಯೆ ಇದ್ದೇವೆ ಎಂದು ತಿಳಿದಿದೆ. ಬರಬೇಕಿದ್ದ ಐವರು ಮಧ್ಯ ಏಷ್ಯಾದ ಅಧ್ಯಕ್ಷರು ಜನವರಿ 27 ರಂದು ವರ್ಚುವಲ್ ಶೃಂಗಸಭೆಯನ್ನು ನಡೆಸಿದರು. ರಾಹುಲ್ ಗಾಂಧಿ ಅದನ್ನೂ ಮಿಸ್ ಮಾಡಿಕೊಂಡರೇ?” ಎಂದಿದ್ದಾರೆ.
ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಮಾಡುವ ಸಾಧನಗಳಾಗಿವೆ ಎಂದೂ ಸದನದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ಇದರ ವಿರುದ್ಧವೂ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಈ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.