ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ವಿತ್ತ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಅದರ ಪ್ರಮುಖ ಅಂಶಗಳು ಇಂತಿವೆ:
* ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ದಕ್ಷತೆಯುಳ್ಳ 400 ವಂದೇ ಭಾರತ್ ರೈಲುಗಳ ಓಡಾಟ ಆರಂಭಿಸಲಾಗುವುದು.
* 100 ಹೊಸ ಗತಿ ಶಕ್ತಿ ಕಾರ್ಗೊ ಟರ್ಮಿನಲ್ ಗಳ ನಿರ್ಮಾಣ. ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ನವೀನ ಮಾರ್ಗಗಳನ್ನು ಅನುಷ್ಠಾನ ಮಾಡಲಾಗುವುದು
* ಎಂಎಸ್ಎಂಇ ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗುವುದು
* ಡ್ರೋನ್ ಶಕ್ತಿ ಮೂಲಕ ಶೀಘ್ರದಲ್ಲಿ ಅಗತ್ಯ ಸರಕು ಸರಂಜಾಮುಗಳ ಪೂರೈಕೆಗೆ ಆದ್ಯತೆ. ಡ್ರೋಣ್ ಶಕ್ತಿ ಮೂಲಕ ಸ್ಟಾರ್ಟಪ್ ಗಳಿಗೂ ಉತ್ತೇಜನ
* ಪಿಎಂ ಇ-ವಿದ್ಯಾ ಮೂಲಕ ಡಿಜಿಟಲ್ ಶಿಕ್ಷಣ ದೂರ ಶಿಕ್ಷಣಕ್ಕೆ ಒತ್ತು
* ಟೆಲಿ ಮೆಂಟಲ್ ಹೆಲ್ತ್ ಸೆಂಟರುಗಳ ನಿರ್ಮಾಣ
* ಅಗತ್ಯ ಸೌಕರ್ಯಗಳಿರುವ 2 ಲಕ್ಷ ಸಕ್ಷಮ ಅಂಗನವಾಡಿಗಳ ನಿರ್ಮಾಣ
* ನಾರಿ ಶಕ್ತಿ ಮೂಲಕ ಮಹಿಳಾ ಸ್ವಾವಲಂಬನೆಗೆ ಹೆಚ್ಚಿನ ಒತ್ತು
* ಅಂಗನವಾಡಿಗಳು ಮೇಲ್ದರ್ಜೆಗೆ
* ಸಾಂಕ್ರಾಮಿಕ ಕಾರಣ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಪಿಎಂ ಇ-ವಿದ್ಯಾ ಮೂಲಕ ಶಿಕ್ಷಣಕ್ಕೆ ಅವಕಾಶ
* ಈಶಾನ್ಯ ಭಾರತದ ಅಭಿವೃದ್ಧಿಗೆ ಪಿ.ಎಂ ವಿಕಾಸ ಯೋಜನೆ
* 25,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
* ಪಿಎಂ ವಸತಿ ಯೋಜನೆಗೆ 48000 ಕೋಟಿ ರೂ.
* ಇ-ಪಾಸ್ ಪೋರ್ಟ್ – ಇ- ಚಿಪ್ ಒಳಗೊಂಡಿರುವ ಪಾಸ್ ಪೋರ್ಟ್ ಸೇವೆ 2022-23 ರಲ್ಲಿ ಆರಂಭ
* ನಗರಗಳ ಹೊಸತನ ಸುವ್ಯವಸ್ಥೆಗೆ ಅರ್ಬನ್ ಪ್ಲಾನಿಂಗ್ ಯೋಜನೆ. ಅರ್ಬನ್ ಪ್ಲಾನಿಂಗ್ ಶಿಕ್ಷಣಕ್ಕೆ ಒತ್ತು
* ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ. ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ 2.73 ಲಕ್ಷ ಕೋಟಿ ಘೋಷಣೆ. ಬೆಳೆ ಸಮೀಕ್ಷೆಗೆ ಡ್ರೋಣ್ ಬಳಕೆ.
* ದೇಶದ 5 ನದಿಗಳ ಜೋಡಣೆಗೆ ಸಮ್ಮತಿ. ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ. ಸೋಲಾರ್ ಪವರ್ ಗೆ 4,300 ಕೋಟಿ ರೂಪಾಯಿ. ನರ್ಮದಾ-ಗೋದಾವರಿ ನದಿ ಜೋಡಣೆ.
* ಸಣ್ಣ ಉದ್ದಿಮೆಗಳಿಗೆ 2023ರ ಮಾರ್ಚ್ ವರೆಗೂ ಕ್ರೆಡಿಟ್ ಸ್ಕೀಂ ವಿಸ್ತರಣೆ. 50 ಸಾವಿರ ರೂ. ನಿಧಿಯ ಮೊತ್ತ 5 ಲಕ್ಷ ಕೋಟಿಗೆ ಹೆಚ್ಚಳ. ಕೌಶಲಾಭಿವೃದ್ಧಿಗೆ ಆನ್ ಲೈನ್ ತರಬೇತಿ.
* ಸರ್ಕಾರಿ ಶಾಲೆ ಮಕ್ಕಳಿಗೆ ಒನ್ ಕ್ಲಾಸ್-ಒನ್ ಟಿವಿ ಕಾರ್ಯಕ್ರಮ. ಎಣ್ಣೆ ಕಾಳು ಬೆಳೆಯುವ ರೈತರಿಗೆ ಹೆಚ್ಚಿನ ಒತ್ತು. 200 ಟಿವಿ ಚಾನೆಲ್ ಗಳ ಮೂಲಕ ಪರ್ಯಾಯ ಪಾಠ.
* ಮಾತೃಭಾಷೆಯಲ್ಲೇ ಡಿಜಿಟಲ್ ಪಾಠ ಅಭಿವೃದ್ಧಿ. ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಒತ್ತು. ಸಿರಿಧಾನ್ಯ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ.
* ಡಿಜಿಟಲ್ ವಿವಿ ಸ್ಥಾಪನೆ. ವಿಶ್ವದರ್ಜೆಯ ಡಿಜಿಟಲ್ ಯೂನಿರ್ವಸಿಟಿ ಸ್ಥಾಪನೆ. ಮಹಿಳಾ ಸಬಲೀಕರಣಕ್ಕೆ ಸಕ್ಷಮ ಅಂಗನವಾಡಿ ಯೋಜನೆ. 2 ಲಕ್ಷ ಅಂಗನವಾಡಿಗಳ ಉನ್ನತೀಕರಣ.
* ಅಂಗನವಾಡಿಗಳಿಗೆ ಆಡಿಯೋ, ವಿಡಿಯೋ ವ್ಯವಸ್ಥೆ, 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನೀರು ಪೂರೈಕೆ. 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ.
* ಹರ್ ಘರ್, ನಲ ಜಲ್ ಯೋಜನೆ ಘೋಷಣೆ(ಪ್ರತಿ ಮನೆಗೆ ನಳ ಯೋಜನೆ). 12 ಕೋಟಿ ಮನೆಗಳಿಗೆ ನಳ್ಳಿ ನೀರು ಪೂರೈಸುವ ಗುರಿ. ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು.
* 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣದ ಗುರಿ. ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಒತ್ತು. ಮೂಲಸೌಲಭ್ಯ, ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ.
* ಪೋಸ್ಟ್ ಆಫೀಸ್ ಗಳಿಗೆ ಬ್ಯಾಂಕ್ ಸ್ವರೂಪ. ಎಟಿಎಂ, ಡಿಜಿಟಲ್ ಬ್ಯಾಂಕ್ ಸೇವೆ. 1.4 ಲಕ್ಷ ಪೋಸ್ಟ್ ಆಫೀಸ್ ಗಳ ಸ್ವರೂಪ ಬದಲು. 74 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ.
* 25 ಸಾವಿರ ಅನವಶ್ಯಕ ನಿಯಮಗಳು ರದ್ದು. 1,483 ಅನುಪಯುಕ್ತ ಕಾನೂನು ರದ್ದು. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ. ಗ್ರಾಮ ಸೌಕರ್ಯಕ್ಕೆ ವಿಶೇಷ ಅನುದಾನ.
* ಪಿಎಂ ಆವಾಜ್ ಯೋಜನೆಗೆ 80 ಸಾವಿರ ಕೋಟಿ ರುಪಾಯಿ ಮೀಸಲು. ಇ-ಪಾಸ್ ಪೋರ್ಟ್ ಜಾರಿ.ಚಿಪ್ ಒಳಗೊಂಡ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ಜಾರಿಗೆ ನಿರ್ಧಾರ.
* ಎಲೆಕ್ಟ್ರಿಕ್ ವಾಃನಗಳ ಅಭಿವೃದ್ಧಿಗೆ ಒತ್ತು. ಜಮೀನು ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು. 8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜಿಟಲೀಕರಣ.
* ಬ್ಯಾಟರಿ ಬದಲಾವಣೆ ಯೋಜೆ. ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೆ ತೀರ್ಮಾನ. ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ. ಒನ್ ನೇಷನ್, ಒನ್ ರಿಜಿಸ್ಟ್ಏಷನ್ ವ್ಯವಸ್ಥೆ ಸ್ಥಾಪನೆ.
* 2022ರಲ್ಲೇ 5ಜಿ ತರಂಗಾಂತರ ಹರಾಜು. 5ಜಿಗೆ ಅಗತ್ಯ ಮೂಲಸೌಲಭ್ಯ ನಿರ್ಮಾಣಕ್ಕೆ ಒತ್ತು. 5 ಜಿ ಸಂಬಂಧಿ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ಧನ.
* ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ. ಪ್ರತಿಯೊಂದು ಗ್ರಾಮಕ್ಕೂ ಆಫ್ಟಿಕಲ್ ಪೈಬರ್ ಮೂಲಕ ಇಂಟರ್ ನೆಟ್ ವ್ಯವಸ್ಥೆ. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್ ನೆಟ್ ಸೌಲಭ್ಯ.
* ರಕ್ಷಣಾ ಇಲಾಖೆಯಲ್ಲೂ ಆತ್ಮನಿರ್ಭರಕ್ಕೆ ಒತ್ತು. ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಶೇ.68ರಷ್ಟು ಸ್ಥಳೀಯ ಸಾಮಗ್ರಿ ಖರೀದಿ ಕಡ್ಡಾಯ. ಇದರೊಂದಿಗೆ ಪರ್ಸೆಂಟೇಜ್ ವ್ಯವಹಾರಕ್ಕೆ ಕಡಿವಾಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.