ನವದೆಹಲಿ: ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಶುಕ್ರವಾರ ಗಡಿ ಭದ್ರತಾ ಪಡೆ ಜೊತೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಕರ್ತಾರ್ಪುರ ಕಾರಿಡಾರ್ ಬಳಿ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ಪಾಕಿಸ್ತಾನಿ ಸ್ಮಗ್ಲರ್ಗಳ ನಡುವೆ ಎನ್ಕೌಂಟರ್ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಬಿಎಸ್ಎಫ್ ಯೋಧನೊಬ್ಬ ಗಾಯಗೊಂಡಿದ್ದಾರೆ. ಪಾಕಿಸ್ತಾನಿ ಸ್ಮಗ್ಲರ್ಗಳ ಪ್ರಮುಖ ಕಳ್ಳಸಾಗಣೆ ಪ್ರಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಿಗ್ಗೆ 5.15 ರ ಸುಮಾರಿಗೆ ಬಿಎಸ್ಎಫ್ ಯೋಧರು ಬೇಲಿ ಬಳಿ ಕಳ್ಳಸಾಗಾಣೆದಾರರ ಚಲನವಲನ ಗಮನಿಸಿ ಗುಂಡಿನ ದಾಳಿ ನಡೆಸಿದಾಗ ಎನ್ಕೌಂಟರ್ ನಡೆಯಿತು. ಪಾಕಿಸ್ತಾನಿ ರೇಂಜರ್ಗಳ ಬೆಂಬಲದೊಂದಿಗೆ ಕಳ್ಳಸಾಗಣೆದಾರರು ಸಹ ಪ್ರತೀಕಾರ ತೀರಿಸಿಕೊಂಡರು ಮತ್ತು ಗುಂಡಿನ ವಿನಿಮಯದಲ್ಲಿ ಒಬ್ಬ ಯೋಧ ಗಾಯಗೊಂಡರು. ಅವರ ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಎನ್ಕೌಂಟರ್ ನಂತರ, ಬಿಎಸ್ಎಫ್ ಪಡೆಗಳು 47 ಹಳದಿ ಪ್ಲಾಸ್ಟಿಕ್ ಕವರ್ ಹೆರಾಯಿನ್ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 200 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಇದಲ್ಲದೆ, ಪಡೆಗಳು ಎರಡು ಪಿಸ್ತೂಲ್ಗಳು, ಕೆಲವು ಜೀವಂತ ಮದ್ದುಗುಂಡುಗಳು, ಎಕೆ 47 ನ 4 ಮ್ಯಾಗಜೀನ್ಗಳು ಮತ್ತು ಏಳು ಪ್ಯಾಕೆಟ್ ಅಫೀಮುಗಳನ್ನು ವಶಪಡಿಸಿಕೊಂಡಿವೆ.
ಕರ್ತಾರ್ಪುರ ಕಾರಿಡಾರ್ ಅನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಆತಂಕಗಳು ಇದ್ದವು, ಈಗ ಅದು ನಿಜವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.