ನವದೆಹಲಿ: 73ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಇದು ಭಾರತೀಯತೆಯನ್ನು ಸಂಭ್ರಮಿಸುವ ಸಂದರ್ಭವಾಗಿದೆ” ಎಂದು ಕೋವಿಂದ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಅವರು, ಸ್ವತಂತ್ರ ಹೋರಾಟಗಾರರು ಸ್ವರಾಜ್ಯದ ಕನಸನ್ನು ನನಸಾಗಿಸಲು ಅಪ್ರತಿಮ ಧೈರ್ಯ ತೋರಿಸಿದ್ದಾರೆ ಹೋರಾಡಲು ಜನರನ್ನು ಪ್ರೇರೇಪಿಸಿದ್ದಾರೆ” ಎಂದಿದ್ದಾರೆ.
“73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ವಾಸಿಸುವ ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ಹೃದಯ ಪೂರ್ವಕ ಶುಭಾಶಯಗಳು. ಇದು ಭಾರತೀಯತೆಯನ್ನು ಸಂಭ್ರಮಿಸುವ ಸಂದರ್ಭವಾಗಿದೆ” ಎಂದಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಸ್ವಾತಂತ್ರ್ಯಕ್ಕಾಗಿನ ಅವರ ಮಹಾತ್ವಕಾಂಕ್ಷಿ ಮತ್ತು ಹೋರಾಟ ಭಾರತವನ್ನು ಹೆಮ್ಮೆ ಪಡಿಸುತ್ತದೆ” ಎಂದಿದ್ದಾರೆ.
ರಾಷ್ಟ್ರಕ್ಕೆ ಸೇವೆಸಲ್ಲಿಸುವ ಕರ್ತವ್ಯವನ್ನು ಈಡೇರಿಸುತ್ತಾ ಪ್ರತಿ ನಾಗರಿಕರು ಸ್ವಚ್ಛತಾ ಅಭಿಯಾನದಿಂದ ಹಿಡಿದು ಲಸಿಕಾ ಅಭಿಯಾನದವರೆಗೆ ಜನಾಂದೋಲನದಲ್ಲಿ ಭಾಗಿಯಾಗಿದ್ದಾರೆ. ಇಂತಹ ದೊಡ್ಡ ಅಭಿಯಾನದ ಯಶಸ್ಸಿನ ಶ್ರೇಯಸ್ಸು ನಾಗರಿಕರಿಗೆ ಸಲ್ಲುತ್ತದೆ ಎಂದಿದ್ದಾರೆ.
ಕೊರೋನಾವೈರಸ್ ವಿರುದ್ಧ ನಾವು ಅಪರಿಮಿತ ಸಮರ್ಪಣೆ ಮತ್ತು ದಕ್ಷತೆಯೊಂದಿಗೆ ಹೋರಾಡುತ್ತಿದ್ದೇವೆ. ಅಸಂಖ್ಯಾತ ಕುಟುಂಬಗಳು ಸಂಕಷ್ಟವನ್ನು ಎದುರಿಸಿವೆ. ಅವರ ನೋವನ್ನು ವಿವರಿಸಲು ಪದಗಳು ನನ್ನ ಬಳಿ ಇಲ್ಲ. ಆದರೆ ಆ ಕುಟುಂಬಗಳಿಗೆ ನನ್ನ ಸಂತಾಪ. ಈಗಲೂ ಕರೋನವೈರಸ್ ವ್ಯಾಪಕವಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರೆಸುವ ಅಗತ್ಯವಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.