ನವದೆಹಲಿ: ಗಣರಾಜ್ಯೋತ್ಸವದ ಮುನ್ನಾದಿನವಾದ ಇಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ 384 ರಕ್ಷಣಾ ಸಿಬ್ಬಂದಿಯನ್ನು ಶೌರ್ಯ ಮತ್ತು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಲಿದ್ದಾರೆ. ಈ ಪ್ರಶಸ್ತಿಗಳಲ್ಲಿ 12 ಶೌರ್ಯ ಚಕ್ರಗಳು, 29 ಪರಮ ವಿಶಿಷ್ಟ ಸೇವಾ ಪದಕಗಳು, ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳು, ಮೂರು ವಿಶಿಷ್ಟ ಸೇವಾ ಪದಕಗಳು ಸೇರಿವೆ.
ರಾಷ್ಟ್ರಪತಿಗಳು 122 ವಿಶಿಷ್ಟ ಸೇವಾ ಪದಕಗಳು, ಸೇನಾ ಪದಕಗಳು (ಶೌರ್ಯ), 81 ಸೇನಾ ಪದಕಗಳು (ಶೌರ್ಯ), ಎರಡು ವಾಯು ಸೇನಾ ಪದಕಗಳು (ಶೌರ್ಯ), 40 ಸೇನಾ ಪದಕಗಳು (ಕರ್ತವ್ಯಕ್ಕೆ ಭಕ್ತಿ), ಎಂಟು ನಾವೋ ಸೇನಾ ಪದಕಗಳನ್ನು ವಿಜೇತರನ್ನು ಗೌರವಿಸುತ್ತಾರೆ. (ಕರ್ತವ್ಯಕ್ಕೆ ಭಕ್ತಿ), ಮತ್ತು ಸಂಜೆ 14 ವಾಯು ಸೇನಾ ಪದಕ (ಕರ್ತವ್ಯಕ್ಕೆ ಭಕ್ತಿ)ಗಳನ್ನು ಪ್ರದಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.