ನವದೆಹಲಿ: ‘ಕಲಾ ಕುಂಭ’ ಎಂಬ ವಿಶಿಷ್ಟ ಉಪಕ್ರಮದ ಅಡಿಯಲ್ಲಿ ರಚಿಸಲಾದ ದೈತ್ಯಾಕಾರದ ಮತ್ತು ಅದ್ಭುತವಾದ ಚಿತ್ರಕಲೆಗಳ ಸ್ಕ್ರೋಲ್ಗಳು ಈ ಗಣರಾಜ್ಯೋತ್ಸವ ಆಚರಣೆಗಾಗಿ ರಾಜಪಥದಲ್ಲಿ ಸ್ಥಾಪಿಸಲ್ಪಟ್ಟಿವೆ. ಈ ಚಿತ್ರಕಲೆ ಸ್ಕ್ರೋಲ್ಗಳು ದೇಶದ ವಿವಿಧ ಭೌಗೋಳಿಕ ಸ್ಥಳಗಳ ಕಲೆಯ ವಿವಿಧ ಪ್ರಕಾರಗಳನ್ನು ಪ್ರತಿಬಿಂಬಿಸುತ್ತಿವೆ. ಇದು ರಾಷ್ಟ್ರೀಯ ಹೆಮ್ಮೆ ಮತ್ತು ಶ್ರೇಷ್ಠತೆಯನ್ನು ವ್ಯಕ್ತಪಡಿಸುವಲ್ಲಿ ಕಲೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿವೆ.
ಒಡಿಶಾ ಮತ್ತು ಚಂಡೀಗಢ ಎಂಬ ಎರಡು ಸ್ಥಳಗಳಲ್ಲಿ ನಡೆದ ವಿಶೇಷ ಕಾರ್ಯಾಗಾರಗಳು ಅಥವಾ ‘ಕಲಾ ಕುಂಭ’ದಲ್ಲಿ ಭಾಗವಹಿಸಿದ ಐನೂರಕ್ಕೂ ಹೆಚ್ಚು ಕಲಾವಿದರು ಇವುಗಳನ್ನು ಶ್ರದ್ಧೆಯಿಂದ ಸಂಶೋಧಿಸಿ ಉತ್ಸಾಹದಿಂದ ಚಿತ್ರಿಸಿ ರಾಜಪಥದಲ್ಲಿ ಸ್ಥಾಪಿಸಿದ್ದಾರೆ. ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಇಂದು ರಾಜಪಥಕ್ಕೆ ಭೇಟಿ ನೀಡಿ ಇವುಗಳನ್ನು ಪರಿಶೀಲಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೋಹನ್, ದೇಶವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 750 ಮೀಟರ್ ಉದ್ದದಲ್ಲಿ ಸ್ಕ್ರೋಲ್ಗಳಲ್ಲಿ ಚಿತ್ತಾರ ಮೂಡಿಸುವುದು ಸಂಸ್ಕೃತಿ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ವಿಶಿಷ್ಟ ಉಪಕ್ರಮವಾಗಿದೆ. ಭವ್ಯವಾದ ಚಿತ್ರಗಳನ್ನು ವಿವಿಧ ಪ್ರದೇಶಗಳ ಸ್ಥಳೀಯ ಕಲಾವಿದರು ಚಿತ್ರಿಸಿದ್ದಾರೆ ಮತ್ತು ಸ್ವಾತಂತ್ರ್ಯ ಹೋರಾಟದ ತೆರೆಮರೆ ವೀರರ ಶೌರ್ಯದ ಕಥೆಗಳನ್ನು ಹೆಚ್ಚಾಗಿ ಚಿತ್ರಿಸಲಾಗಿದೆ ಎಂದಿದ್ದಾರೆ.
ಈ ಕಲಾವಿದರ ವೈವಿಧ್ಯಮಯ ಕಲಾ ಪ್ರಕಾರಗಳು ಏಕ್ ಭಾರತ್ ಶ್ರೇಷ್ಠ ಭಾರತ್ನ ನಿಜವಾದ ಸ್ಪೂರ್ತಿಯನ್ನು ಒಂದೇ ವೇದಿಕೆಯಲ್ಲಿ ಪ್ರತಿಫಲಿಸಿವೆ. ಗಣರಾಜ್ಯೋತ್ಸವದ ನಂತರ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶದ ವಿವಿಧ ಭಾಗಗಳಿಗೆ ಈ ಸ್ಕ್ರೋಲ್ಗಳನ್ನು ಕೊಂಡೊಯ್ದು ಅಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.