ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಿವಾಸಿಗಳು ಸಹಾಯಕ್ಕಾಗಿ ಮತ್ತೊಮ್ಮೆ ಭಾರತವನ್ನು ಅಂಗಲಾಚಿದ ಘಟನೆ ನಡೆದಿದೆ. ಮುಜಫರಾಬಾದ್ ವ್ಯಕ್ತಿಯೊಬ್ಬರು ಪಿಒಕೆಯ ತಮ್ಮ ಮನೆಯಿಂದ ಹೊರಹಾಕಲ್ಪಟ್ಟ ನಂತರ ಬೆಂಬಲ ಮತ್ತು ಮಧ್ಯಸ್ಥಿಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಮಲಿಕ್ ವಾಸೀಂ ಎಂಬುವವರ ಕುಂಟುಂಬವನ್ನು ಪಿಒಕೆ ಆಡಳಿತ ಮನೆಯಿಂದ ಹೊರಹಾಕಿದ್ದು, ಹೆಪ್ಪುಗಟ್ಟುವ ಚಳಿಯಲ್ಲಿ ಸೂರಿಲ್ಲದೆ ಹೊರಗೆ ನಿಲ್ಲುವ ಪರಿಸ್ಥಿತಿ ಇವರಿಗೆ ಎದುರಾಗಿದೆ.
ಮಲಿಕ್ ವಾಸಿಮ್ ಮುಜಫರಾಬಾದ್ನಲ್ಲಿನ ಅಧಿಕಾರಿಗಳ ಕೈಯಿಂದ ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಿಸಲು ಭಾರತದ ಮಧ್ಯಸ್ಥಿಕೆ ವಹಿಸಬೇಕು ಎಂದು ಅಂಗಲಾಚುತ್ತಿರುವ ವಿಡಿಯೋ ವೈರಲ್ ಆಗಿದೆ.
“ಪೊಲೀಸರು ಮತ್ತು ಅಧಿಕಾರಿಗಳು ನಮ್ಮ ಮನೆಗೆ ಸೀಲ್ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಯಾವ ಪರಿಸ್ಥಿತಿ ಒದಗಿದೆಯೋ ಅದಕ್ಕೆ ಮುಜಫರಾಬಾದ್ ಕಮಿಷನರ್, ಮುಜಫರಾಬಾದ್ ತಹಸೀಲ್ದಾರ್ ಜವಾಬ್ದಾರರಾಗಿರುತ್ತಾರೆ ಎಂದು ನಾನು ಘೋಷಿಸುತ್ತೇನೆ” ಎಂದು ವಸೀಮ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವೀಡಿಯೊದಲ್ಲಿ ಹೇಳಿದ್ದಾರೆ.
ಮುಜಫರಾಬಾದ್ನ ಸ್ಥಳೀಯ ಆಡಳಿತವು ಈ ವ್ಯಕ್ತಿಯನ್ನು ತನ್ನ ಮನೆಯಿಂದ ಹೊರಹಾಕಿದೆ ಮತ್ತು ಅವರ ಜಮೀನನ್ನು ಪ್ರಭಾವಿ ವ್ಯಕ್ತಿಯೊಬ್ಬರು ಪೊಲೀಸರೊಂದಿಗೆ ಶಾಮೀಲಾಗಿ ವಶಪಡಿಸಿಕೊಂಡಿದ್ದಾರೆ ಎಂದು ಮುಜಫರಾಬಾದ್ ಮೂಲಗಳು ತಿಳಿಸಿವೆ.
ಈ ಭೂಮಿ ಭಾರತಕ್ಕೆ ಸೇರಿದ್ದು ಮತ್ತು ಅದರ ಮಾಲೀಕತ್ವವು ಮುಸ್ಲಿಮೇತರರು ಮತ್ತು ಸಿಖ್ಖರದ್ದಾಗಿದೆ ಎಂದು ಆ ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ. “ಪೊಲೀಸರು ಸಾವಿರಾರು ನಾಗರಿಕರ ಮನೆಗಳನ್ನು ಮುಚ್ಚಿದ್ದಾರೆ ಮತ್ತು ಅವರ ಕುಟುಂಬಗಳು ಮತ್ತು ಮಕ್ಕಳನ್ನು ಈ ತೀವ್ರ ಚಳಿಯ ವಾತಾವರಣದಲ್ಲಿ ಬೀದಿಗಳಲ್ಲಿ ವಾಸಿಸುವಂತೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಪಿಒಕೆಯಲ್ಲಿ ಪ್ರಭಾವಿ ವ್ಯಕ್ತಿಗಳು ಜನರನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ.
“ಪ್ರಧಾನಿ ಮೋದಿಯವರು ಬಂದು ಅವರಿಗೆ (ಪಾಕಿಸ್ತಾನಕ್ಕೆ) ಪಾಠ ಕಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು ನಿಮ್ಮ ಆಸ್ತಿ. ಇದು ಮುಸ್ಲಿಮೇತರರು ಮತ್ತು ಸಿಖ್ಖರಿಗೆ ಸೇರಿದೆ. ಬಂದು ಈ ದೌರ್ಜನ್ಯಗಳಿಂದ ಜನರನ್ನು ರಕ್ಷಿಸಿ,” ವಸೀಮ್ ಮನವಿ ಮಾಡಿರುವುದು ವೀಡಿಯೊದಲ್ಲಿ ಇದೆ.
ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ನಿವಾಸಿಗಳು ಪದೇ ಪದೇ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಪಿಒಕೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ, ಇದು 1947 ರಲ್ಲಿ ಪಾಕಿಸ್ತಾನದಿಂದ ಆಕ್ರಮಣಕ್ಕೊಳಗಾಗಿದ್ದು, ಅಂದಿನಿಂದ ಈ ಪ್ರದೇಶವು ತಾರತಮ್ಯ ಮತ್ತು ದೌರ್ಜನ್ಯಗಳಿಗೆ ಒಳಗಾಗಿದೆ.
ಎರಡು ಗಂಟೆಯೊಳಗೆ ನನ್ನ ಮನೆಯನ್ನು ನನಗೆ ಹಿಂತಿರುಗಿಸದಿದ್ದರೆ, ನಾನು ಆತ್ಮಹತ್ಯೆಯಿಂದ ಸಾಯುತ್ತೇನೆ ಮತ್ತು ಅದಕ್ಕೆ ಅವರೇ ಹೊಣೆಯಾಗುತ್ತಾರೆ ಎಂದು ನಾನು ಕಮಿಷನರ್ಗೆ ಮನವಿ ಮಾಡುತ್ತೇನೆ ಎಂದು ವಾಸೀಂ ಹೇಳಿದ್ದಾರೆ.
ಈ ಪ್ರದೇಶವು ಮುಜಫರಾಬಾದ್ನ ಪೊಲೀಸ್ ತರಬೇತಿ ಶಾಲೆಯ ಪ್ರದೇಶದ ಸಮೀಪದಲ್ಲಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.