ಜಮ್ಮು: ಜಮ್ಮು- ಕಾಶ್ಮೀರ ಆಡಳಿತದ ಯೋಜನೆಯ ಫಲವಾಗಿ ಕನಿಷ್ಠ ಒಂದು ಲಕ್ಷ ಹೆಕ್ಟೇರ್ ಅತಿಕ್ರಮಿತ ಸರ್ಕಾರಿ ಭೂಮಿ ಮತ್ತು ಗ್ರಾಮದ ಸಾಮಾನ್ಯ ಭೂಮಿಯನ್ನು (ಶಾಮಲಾತ್ ಮತ್ತು ಕಹ್ಚರೈ) ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಂದಾಯ ಇಲಾಖೆಯ ದಾಖಲೆಗಳ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಭೂಮಿಯಲ್ಲಿ ಸುಮಾರು 65% ಹಿಂದಿನ ಜಮ್ಮು- ಕಾಶ್ಮೀರ ರಾಜ್ಯದ ಜಮ್ಮು ವಿಭಾಗದಲ್ಲಿ ಇದೆ. ಸ್ಥಳೀಯ ಮಟ್ಟದಲ್ಲಿ ಕಂದಾಯ ಸಿಬ್ಬಂದಿಯ ಭ್ರಷ್ಟಾಚಾರವಿಲ್ಲದೆ ಇಂತಹ ವ್ಯಾಪಕ ಮತ್ತು ದೀರ್ಘಾವಧಿಯ ಅತಿಕ್ರಮಣ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 60,000 ಎಕರೆಗೂ ಹೆಚ್ಚು ಒತ್ತುವರಿ ಭೂಮಿಯನ್ನು ಹಿಂಪಡೆಯಲಾಗಿದೆ ಎಂದು ಜಮ್ಮು- ಕಾಶ್ಮೀರ ಆಡಳಿತ ತಿಳಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾದ ಆರ್ ಆರ್ ಭಟ್ನಾಗರ್ ಅವರು ಕೇಂದ್ರಾಡಳಿತ ಪ್ರದೇಶದಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕುವುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಡ್ಯಾಶ್ ಬೋರ್ಡ್ ರಚಿಸಲು ಸೂಚಿಸಿದ್ದಾರೆ.
ಹಿಂಪಡೆದ ಯಾವುದೇ ಭೂಪ್ರದೇಶವನ್ನು ಪುನಃ ಅತಿಕ್ರಮಣ ಮಾಡದಂತೆ ಕಾರ್ಯವಿಧಾನವನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೂ ದಾಖಲೆಗಳ ಡಿಜಿಟಲೀಕರಣ, ಅಕ್ರಮ ನಮೂದುಗಳ ನಿರ್ಮೂಲನೆ, ಕಾಣೆಯಾದ ದಾಖಲೆಗಳನ್ನು ಹೊಸದಾಗಿ ಪುನರ್ನಿರ್ಮಿಸುವ ಪ್ರಕ್ರಿಯೆ ಮತ್ತು ಕಂದಾಯ ನ್ಯಾಯಾಲಯಗಳ ಪ್ರಗತಿಯ ಬಗ್ಗೆಯೂ ಸಲಹೆಗಾರರು ವಿಚಾರಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.