ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಸಿದ್ಧಾರ್ಥ್ ಮಾಡಿರುವ ಕೆಟ್ಟ ಅಭಿರುಚಿಯ ಕಾಮೆಂಟ್ ಅನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜ್ಜು ಖಂಡಿಸಿದ್ದಾರೆ.
ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಬಗ್ಗೆ ನೆಹ್ವಾಲ್ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಸಿದ್ದಾರ್ಥ ಕೆಟ್ಟ ರೀತಿಯ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ದೇಶವ್ಯಾಪಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಇಂದು ಟ್ವಿಟ್ ಮಾಡಿರುವ ಕಿರಣ್ ರಿಜ್ಜು, “ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವಲ್ಲಿ ಸೈನಾ ನೆಹ್ವಾಲ್ ಅವರ ಅತ್ಯುತ್ತಮ ಕೊಡುಗೆಗಾಗಿ ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ. ಅವರು ಒಲಂಪಿಕ್ ಪದಕ ವಿಜೇತೆ ಜೊತೆಗೆ ದೃಢ ದೇಶಭಕ್ತೆ. ಅಂತಹ ಐಕಾನ್ ವ್ಯಕ್ತಿತ್ವದ ಬಗ್ಗೆ ಕೀಳು ಮಟ್ಟದ ಕಾಮೆಂಟ್ ಮಾಡುವುದು ವ್ಯಕ್ತಿಯ ಅವಿವೇಕದ ಮನಸ್ಥಿತಿಯನ್ನು ಬಿಂಬಿಸುತ್ತದೆ” ಎಂದಿದ್ದಾರೆ.
ಸಿದ್ಧಾರ್ಥ್ ಟ್ವೀಟ್ ಅನ್ನು ಇತರ ನಾಯಕರು ಕೂಡ ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಈ ವಿಷಯವನ್ನು ಪೊಲೀಸರ ಬಳಿ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬು ಸುಂದರ್ ಟ್ವೀಟ್ ಮಾಡಿ, “ಬಹಳ ಕ್ರೂರ ವರ್ತನೆ. ಒಬ್ಬ ವ್ಯಕ್ತಿಯ ಕಡೆಗೆ ನಿಮ್ಮ ದ್ವೇಷವನ್ನು ಸಾಗಿಸಬೇಡಿ” ಎಂದಿದ್ದಾರೆ.
ಸೈನಾ ನೆಹ್ವಾಲ್ ತಂದೆ ಕೂಡ ಸಿದ್ದಾರ್ಥ್ ವಿರುದ್ಧ ಹರಿಹಾಯ್ದಿದ್ದು, ನನ್ನ ಮಗಳು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ, ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸೈನಾ ಪತಿ ಪರುಪಳ್ಳಿ ಕಶ್ಯಪ್ ಟ್ವಿಟ್ ಮಾಡಿ ಸಿದ್ಧಾರ್ಥ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ವಿರೋಧಿ ಧೋರಣೆಗೆ ಹೆಸರಾಗಿರುವ ಸಿದ್ದಾರ್ಥ್ ತನ್ನನ್ನು ತಾನು ಮಹಿಳಾ ವಾದಿ ಎಂದು ಕರೆಸಿಕೊಳ್ಳುತ್ತಾರೆ. ಆದರೆ ಮೋದಿ ವಿರುದ್ಧವಾಗಿ ಮಾತನಾಡುವ ಮಹಿಳೆಯರ ಬಗ್ಗೆ ಮಾತ್ರ ಅವರು ಗೌರವಾದಾರ ತೋರಿಸುತ್ತಾರೆ. ಮೋದಿ ಪರ ಇರುವ ಮಹಿಳೆಯರ ಬಗ್ಗೆ ಕೆಟ್ಟ ಧೋರಣೆ ಹೊಂದಿದ್ದಾರೆ ಎಂದು ನೆಟಿಜನ್ಗಳು ಸಿದ್ದಾರ್ಥ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
India is proud of @NSaina for her outstanding contributions in making India a sporting powerhouse. She is a steadfast patriot besides being an Olympic medalist 🇮🇳
Making a cheap comment on such an icon personality depics a person’s ignoble mentality. https://t.co/L4yV3xdRuh— Kiren Rijiju (@KirenRijiju) January 11, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.