ನವದೆಹಲಿ: ನವದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ವೋಕಲ್ ಫಾರ್ ಲೋಕಲ್ ಮತ್ತು ʼಸ್ವದೇಶಿ ಸೆ ಸ್ವಾವಲಂಬನ್’ ಎಂಬ ಥೀಮ್ನೊಂದಿಗೆ ಆಯೋಜಿಸಲಾದ ಹುನಾರ್ ಹಾತ್ನ 35 ನೇ ಆವೃತ್ತಿಯಲ್ಲಿ ದೇಶದ 30 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 700 ಕ್ಕೂ ಹೆಚ್ಚು ಕುಶಲಕರ್ಮಿಗಳು, ಕರಕುಶಲಕರ್ಮಿಗಳು ಭಾಗವಹಿಸಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಹುನಾರ್ ಹಾತ್ಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇಂದು ಮಧ್ಯಾಹ್ನದಿಂದ ಹುನಾರ್ ಹಾತ್ ಅನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಈ ಹುನಾರ್ ಹಾತ್ ಅನ್ನು ಮುಂದಿನ ತಿಂಗಳು 5 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಕೋವಿಡ್ ಕಾರಣದಿಂದ ಬೇಗ ಮುಕ್ತಾಯ ಮಾಡಲಾಗುತ್ತಿದೆ.
ಹುನಾರ್ ಹಾತ್ ಕಲೆ ಮತ್ತು ಕರಕುಶಲದ ಭಾರತೀಯ ಪರಂಪರೆಯ ರಕ್ಷಣೆ, ಸಂರಕ್ಷಣೆ, ಪ್ರಚಾರದ ಪರಿಪೂರ್ಣ ವೇದಿಕೆಯಾಗಿದೆ. ಹುನಾರ್ ಹಾತ್ 3ʼVʼಗಳಾದ – ‘ವಿಶ್ವಕರ್ಮ ವಿರಾಸತ್ ಕಾ ವಿಕಾಸ್’ ನ ಪ್ರಬಲ ಮತ್ತು ಪರಿಪೂರ್ಣ ವೇದಿಕೆ ಎಂದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ದೇಶದ ಕಲೆ ಮತ್ತು ಕರಕುಶಲತೆಯ ಪರಂಪರೆಯನ್ನು ರಕ್ಷಿಸುವುದಲ್ಲದೆ, ಇದು ಹೊಸ ಶಕ್ತಿ ಮತ್ತು ಮಾರುಕಟ್ಟೆ ಮತ್ತು ಸ್ವದೇಶಿ ಉತ್ಪನ್ನಗಳಿಗೆ ಅವಕಾಶಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.
ಕಳೆದ ಆರು ವರ್ಷಗಳಲ್ಲಿ ಹುನಾರ್ ಹಾತ್ ಮೂಲಕ ಏಳು ಲಕ್ಷ 50 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಅವರೊಂದಿಗೆ ಬೆಸೆದುಕೊಂಡಿರುವ ಜನರಿಗೆ ಉದ್ಯೋಗ ಮತ್ತು ಸ್ವಉದ್ಯೋಗ ಅವಕಾಶಗಳನ್ನು ಒದಗಿಸಲಾಗಿದೆ. ಅವರಲ್ಲಿ ಶೇಕಡ 50ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು. ಮುಂದಿನ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಹುನಾರ್ ಹಾತ್ ಆಯೋಜಿಸಲಾಗುವುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.