ಕುವೈಟ್ ಸಿಟಿ: ಕನ್ನಡ ನಟ ಹಾಗೂ ಸಮಾಜ ಸೇವಕ ಪುನೀತ್ ರಾಜ್ಕುಮಾರ್ ಅವರ ಜೀವನ ಮತ್ತು ಕಾರ್ಯಗಳನ್ನು ಸ್ಮರಿಸಿ ಗೌರವಿಸುವ ಸಲುವಾಗಿ ಕುವೈಟ್ನ ಭಾರತೀಯ ಪ್ರವಾಸಿ ಪರಿಷತ್ (ಬಿಪಿಪಿ) ಕರ್ನಾಟಕ ವಿಭಾಗ ಮತ್ತು ಬಿಡಿಕೆ ಕುವೈಟ್ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತು.
ಈ ಶಿಬಿರವನ್ನು ಭಾರತ-ಕುವೈಟ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವ ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿಯೂ ಆಯೋಜಿಸಲಾಗಿದೆ.
ಆದಾನ್ ಕೊಅಪರೇಟಿವ್ ಬ್ಲಡ್ ಟ್ರಾನ್ಸ್ಫ್ಯೂಸನ್ ಸೆಂಟರ್ನಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ 1 ರಿಂದ 6 ರವರೆಗೆ ಶಿಬಿರ ನಡೆದಿದ್ದು, ಇದು ಕುವೈಟ್ನಲ್ಲಿರುವ ಭಾರತೀಯ ವಲಸಿಗರಿಂದ ಅದ್ಬುತ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ಸುಮಾರು 125 ದಾನಿಗಳು ರಕ್ತದಾನ ಮಾಡಿದ್ದಾರೆ.
ಬಿಪಿಪಿ ಅಧ್ಯಕ್ಷ ರಾಜ್ ಭಂಡಾರಿ ತಿರುಮಲೆಗುತ್ತು ಅಧ್ಯಕ್ಷತೆಯಲ್ಲಿ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ನಡೆಯಿತು. ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಶಾಖೆಯ ವ್ಯವಸ್ಥಾಪಕ ಅಬ್ದುಲ್ ರಝಾಕ್ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.. “ಕೋಸ್ಟಲ್ ವೈಬ್ಸ್” ಮೂಲಕ ವಿವಿಧ ವಿಷಯಗಳಲ್ಲಿ ಸಮುದಾಯದೊಂದಿಗೆ ಸಂವಾದ ನಡೆಸುತ್ತಿರುವ ಅರಲ್ ಜಾನ್ ಡಿಸೋಜ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುನಿತ್ ರಾಜ್ ಕುಮಾರ್ ಅವರ ಜೀವನವು ಪರೋಪಕಾರ ಮತ್ತು ಮಾನವೀಯತೆಗೆ ಮಾದರಿ ಎಂದು ಈ ಸಂದರ್ಭದಲ್ಲಿ ಬಣ್ಣಿಸಲಾಯಿತು
ಚಂದ್ರಹಾಸ ಶೆಟ್ಟಿ (ತುಳುಕೂಟ ಕುವೈಟ್ನ ಮಾಜಿ ಅಧ್ಯಕ್ಷರು), ಸುಷ್ಮಾ ಮನೋಜ್ (ಬಿಲ್ಲವ ಸಂಘದ ಉಪಾಧ್ಯಕ್ಷರು, ಕುವೈಟ್), ಮನೋಜ್ ಕುಮಾರ್ (ಮನೋಜ್ ಆರ್ಟ್ ಗ್ಯಾಲರಿ), ಪ್ರಧಾನ ಕಾರ್ಯದರ್ಶಿ ಸವಿನಯ ಅವರು ದಾನಿಗಳಿಗೆ ಅಭಿನಂದನಾ ಸಂದೇಶಗಳನ್ನು ನೀಡಿದರು.
ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತೀಯ ಪ್ರವಾಸಿ ಪರಿಷದ್ಗೆ BDK ಯ ಸಲಹಾ ಮಂಡಳಿಯ ಸದಸ್ಯ ರಾಜನ್ ತೊಟ್ಟತ್ತಿಲ್ ಅವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ರೆಘುಬಾಳ್ ಬಿಡಿಕೆ ಸ್ವಾಗತಿಸಿದರು, ಬಿಪಿಪಿ-ಕರ್ನಾಟಕ ವಿಭಾಗದ ಜಂಟಿ ಕಾರ್ಯದರ್ಶಿ ಚಿತ್ರರಂಜನ್ ದಾಸ್ ಭಾಗವಹಿಸಿದವರಿಗೆ ಮತ್ತು ರಕ್ತದಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಿಡಿಕೆ ಕಾರ್ಯಕರ್ತ ನಿಮಿಷ್ ಕಾವಳಂ ಕಾರ್ಯಕ್ರಮವನ್ನು ಸಂಯೋಜಿಸಿದರು. ಉಪಾಧ್ಯಕ್ಷ ಮಾಧವ ನಾಯ್ಕ, ಖಜಾಂಚಿ ವಿಜೀತ್ ತುಂಬೆ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅರುಣ್ ರಾಮ್, ಜಂಟಿ ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಕುಂದರ್, ಕುವೈಟ್ ಕರ್ನಾಟಕ ವಿಭಾಗದ ಬಿಪಿಪಿಯ ವಿಶು ಕಾರ್ಯಕಾರಿ ಸದಸ್ಯರಾದ ಗುರುರಾಜ್, ಕ ಥಾಮಸ್ ಜಾನ್, ಮಾರ್ಟಿನ್, ಚಾರ್ಲ್ಸ್, ವಿನೋದ್, ಮುನೀರ್, ಜಾಲಿ, ಬಿಡಿಕೆಯ ವೇಣುಗೋಪಾಲ್, ಜಯನ್, ದೀಪು, ಪ್ರೇಮಕಿರಣ್, ಅನಿತಾ ನಾಯರ್ ಮತ್ತು ಯಮುನಾ ಶಿಬಿರದ ಯಶಸ್ವಿ ಕಾರ್ಯನಿರ್ವಹಣೆಗೆ ಸ್ವಯಂಪ್ರೇರಿತ ಸೇವೆ ಸಲ್ಲಿಸಿದರು.
ಸಮಾಜ ಸೇವಾ ಉತ್ಸಾಹಿಗಳು ಮತ್ತು ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಲು, ಕೇಂದ್ರ ರಕ್ತ ಬ್ಯಾಂಕ್ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳ ಸೇವೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಲು ಕೇರಳದ ರಕ್ತದಾನಿಗಳನ್ನು ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.