ನವದೆಹಲಿ: ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೂಲಭೂತ ಪಾತ್ರವನ್ನು ಒತ್ತಿಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಜಾಪ್ರಭುತ್ವವು ಕೇವಲ ಒಂದು ವ್ಯವಸ್ಥೆಯಲ್ಲ ಆದು ಭಾರತದ ನೈಸರ್ಗಿಕ ಪ್ರವೃತ್ತಿಯಾಗಿದೆ ಎಂದಿದ್ದಾರೆ.
ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 82ನೇ ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಭಾಗವಹಿಸಿ ಮಾತನಾಡಿದರು.
‘ಒಂದು ರಾಷ್ಟ್ರ, ಒಂದು ಶಾಸಕಾಂಗ ವೇದಿಕೆ’ ಸಾಧ್ಯವಾಗಬಹುದೇ? ಒಂದು ವೇಳೆ ಸಾಧ್ಯವಾದರೆ ಅದು ನಮ್ಮ ಸಂಸದೀಯ ವ್ಯವಸ್ಥೆಗೆ ತಾಂತ್ರಿಕ ಉತ್ತೇಜನವನ್ನು ನೀಡುವುದಲ್ಲದೆ, ಎಲ್ಲಾ ಪ್ರಜಾಪ್ರಭುತ್ವ ಘಟಕಗಳನ್ನು ಸಂಪರ್ಕಿಸುವ ಕೊಂಡಿ ಆಗಿರುತ್ತದೆ” ಎಂದಿದ್ದಾರೆ.
“ಪ್ರಜಾಪ್ರಭುತ್ವವು ಭಾರತದಲ್ಲಿ ಕೇವಲ ಒಂದು ವ್ಯವಸ್ಥೆ ಅಲ್ಲ. ಪ್ರಜಾಪ್ರಭುತ್ವವು ಭಾರತದ ಸ್ವಭಾವ ಮತ್ತು ಸಹಜ ಪ್ರವೃತ್ತಿಯಾಗಿದೆ. ಮುಂಬರುವ ವರ್ಷಗಳಲ್ಲಿ ನಾವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಇದು ಎಲ್ಲರ ಪ್ರಯತ್ನದಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ʼಎಲ್ಲರ ಪ್ರಯತ್ನʼದ ಬಗ್ಗೆ ಮಾತನಾಡುವಾಗ ರಾಜ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ” ಎಂದಿದ್ದಾರೆ.
“ರಾಷ್ಟ್ರವು ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸುವ ಮೂಲಕ ಕೊರೋನಾ ವಿರುದ್ಧದ ದೊಡ್ಡ ಯುದ್ಧವನ್ನು ಒಗ್ಗಟ್ಟಿನಿಂದ ನಡೆಸಿದೆ, ಇದು ಐತಿಹಾಸಿಕವಾಗಿದೆ. ಇಂದು ಭಾರತವು 110 ಕೋಟಿ ಲಸಿಕೆ ಡೋಸ್ಗಳ ಮೈಲಿಗಲ್ಲನ್ನು ದಾಟಿದೆ. ಒಂದು ಕಾಲದಲ್ಲಿ ಅಸಾಧ್ಯವೆಂದು ತೋರುತ್ತಿದ್ದದ್ದು ಈಗ ಸಾಧ್ಯವಾಗುತ್ತಿದೆ” ಎಂದು ಅವರು ಹೇಳಿದರು.
ಸಂಸತ್ತು ಮತ್ತು ಶಾಸನ ಸಭೆಗಳ ಸಂಪ್ರದಾಯಗಳು ಮತ್ತು ವ್ಯವಸ್ಥೆಗಳು ಭಾರತೀಯವಾಗಿರಬೇಕು ಎಂದು ಪ್ರಧಾನಿ ಹೇಳಿದರು.
“ನಮ್ಮ ನೀತಿಗಳು, ನಮ್ಮ ಕಾನೂನುಗಳು ಭಾರತೀಯತೆಯ ಮನೋಭಾವವನ್ನು ಬಲಪಡಿಸಬೇಕು. ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂಬ ಸಂಕಲ್ಪ ಇರಬೇಕು. ಮನೆಯಲ್ಲಿ ನಮ್ಮ ಸ್ವಂತ ನಡವಳಿಕೆ ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿರಬೇಕು, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
Is it possible to create a 'One Nation, One Legislative Platform'?
It will be a portal that will not just give a technological boost to our Parliamentary system, but also connect all democratic units- PM Shri @narendramodi
— BJP (@BJP4India) November 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.