ಕಠ್ಮಂಡು: ನೇಪಾಳದ ಎರಡು ಜಿಲ್ಲೆಗಳಲ್ಲಿ 2015ರಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಹಾನಿಗೊಳಗಾದ 50,000 ಮನೆಗಳ ಪುನರ್ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಭಾರತ ಸೋಮವಾರ ಪ್ರಕಟಿಸಿದೆ.
ರಾಷ್ಟ್ರೀಯ ಪುನರ್ ನಿರ್ಮಾಣ ಪ್ರಾಧಿಕಾರ (ಎನ್ಆರ್ಎ), ಯುಎನ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್ಡಿಪಿ) ಮತ್ತು ಯುನೈಟೆಡ್ ನೇಷನ್ಸ್ ಆಫೀಸ್ ಫಾರ್ ಪ್ರಾಜೆಕ್ಟ್ ಸರ್ವಿಸಸ್ (ಯುಎನ್ಒಪಿಎಸ್) ಸಹಯೋಗದಲ್ಲಿ ಭಾರತದ ರಾಯಭಾರ ಕಚೇರಿಯು ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಮನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಕೂಡ ಆಯೋಜನೆಗೊಳಿಸಲಾಗಿದೆ.
ನೇಪಾಳ ಸರ್ಕಾರವು ಅಳವಡಿಸಿಕೊಂಡ ಮಾಲೀಕ ಚಾಲಿತ ಪುನರ್ ನಿರ್ಮಾಣ ವಿಧಾನದೊಂದಿಗೆ ಭಾರತ ಸರ್ಕಾರವು 50,000 ಖಾಸಗಿ ಮನೆಗಳ ಪುನರ್ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ಭಾರತದ ಉಪ ಮುಖ್ಯ ರಾಯಭಾರ ಕಚೇರಿಯ ನಮ್ಗ್ಯಾ ಸಿ ಖಂಪಾ ಘೋಷಿಸಿದರು.
ಜಿಲ್ಲೆಗಳ ನಾಲ್ಕು ನಗರ ಪುರಸಭೆಗಳು ಮತ್ತು 14 ಗ್ರಾಮೀಣ ಪುರಸಭೆಗಳಲ್ಲಿ ಭೂಕಂಪ-ಬಾಧಿತ ಫಲಾನುಭವಿಗಳಿಗೆ ಸಾಮಾಜಿಕ-ತಾಂತ್ರಿಕ ಸೌಲಭ್ಯ ಮತ್ತು ಸಮಾಲೋಚನೆ (STFC) ಸೇವೆಗಳನ್ನು ಒದಗಿಸಲು ಭಾರತದ ವತಿಯಿಂದ UNDP ಮತ್ತು UNOPS ಮಾರ್ಚ್ 2018 ರಲ್ಲಿ ತೊಡಗಿಸಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.