ಪುಣೆ: ಖ್ಯಾಥ ಇತಿಹಾಸಕಾರ, ಪದ್ಮ ವಿಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದ ಬಾಬಾಸಾಹೇಬ್ ಪುರಂದರೆ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
99 ವರ್ಷದ ಪುರಂದರೆ ಪುಣೆಯ ದೀನನಾಥ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕಳೆದ ಕೆಲದಿನಗಳಿಂದ ನ್ಯುಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಪುರಂದರೆ ಅವರನ್ನು ‘ಶಿವ್ ಶಾಹಿರ್’ ಎಂದೇ ಕರೆಯಲಾಗುತ್ತಿತ್ತು. ಶಿವಾಜಿ ಬಗ್ಗೆ ನಿಖರವಾದ ಮಾಹಿತಿ ಅವರ ಬಳಿ ಇತ್ತು. ಮರಾಠಿಯಲ್ಲಿ ಅವರು 900 ಪುಟಗಳ ‘ರಾಜ ಶಿವಛತ್ರಪತಿ’ ಪುಸ್ತಕವನ್ನು ಎರಡು ಭಾಗಗಳಲ್ಲಿ ರಚಿಸಿದ್ದಾರೆ. 1950ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಕೃತಿಯು ಈವರೆಗೆ ಹಲವಾರು ಬಾರಿ ಮುದ್ರಣವನ್ನು ಕಂಡಿದೆ. ಮಾತ್ರವಲ್ಲದೆ ಪ್ರತಿ ಮರಾಠಿಗನ ಮನೆಯಲ್ಲೂ ಆ ಪುಸ್ತಕ ಇದೆ.
1980 ರಲ್ಲಿ ಶಿವಾಜಿ ಮಹಾರಾಜ್ ಅವರ ಜೀವನವನ್ನು ಆಧಾರಿಸಿರ ʼಜಾಣತಾ ರಾಜʼ ನಾಟಕವನ್ನು ಇವರು ರಚಿಸಿ ನಿರ್ದೇಶಿಸಿದ್ದರು.
ಇವರ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.
“ಪದಗಳಲ್ಲಿ ಹೇಳಲಾಗದಷ್ಟು ನೋವಾಗಿದೆ. ಶಿವ ಶಾಹೀರ್ ಬಾಬಾಸಾಹೇಬ್ ಪುರಂದರೆ ಅವರ ಅಗಲುವಿಕೆ ಜಗತ್ತಿನ ಇತಿಹಾಸ ಮತ್ತು ಸಂಸ್ಕೃತಿಗಾದ ತುಂಬಲಾರದ ನಷ್ಟ. ಮುಂಬರುವ ಪೀಳಿಗೆಯು ಛತ್ರಪತಿ ಶಿವಾಜಿ ಮಹಾರಾಜ್ ಅವರೊಂದಿಗೆ ಬೆಸೆದುಕೊಳ್ಳುತ್ತದೆ ಎಂದರೆ ಅದಕ್ಕೆ ಪುರಂದರೆ ಅವರಿಗೆ ಧನ್ಯವಾದ ಸಲ್ಲಬೇಕು. ಅವರ ಇತರ ಕಾರ್ಯಗಳು ಕೂಡ ಸದಾ ಸ್ಮರಣೆಯಲ್ಲಿ ಇರುತ್ತದೆ” ಎಂದಿದ್ದಾರೆ.
I am pained beyond words. The demise of Shivshahir Babasaheb Purandare leaves a major void in the world of history and culture. It is thanks to him that the coming generations will get further connected to Chhatrapati Shivaji Maharaj. His other works will also be remembered. pic.twitter.com/Ehu4NapPSL
— Narendra Modi (@narendramodi) November 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.