ನವದೆಹಲಿ: ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ (SSC) ಕುರಿತು ಒಂದು ವಾರದ ಜಾಗೃತಿ ಅಭಿಯಾನವನ್ನು ಇಂದು ಪ್ರಾರಂಭಿಸಲಿದೆ.
ದೇಶಾದ್ಯಂತ ನಡೆಸಲಾಗುತ್ತಿರುವ ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ನಲ್ಲಿ ಒಟ್ಟು 246 ನಗರಗಳು ಭಾಗವಹಿಸುತ್ತಿವೆ.
ಸುರಕ್ಷಾ ಚಾಲೆಂಜ್ ಮೂಲಕ, ಅಪಾಯಕಾರಿ ಕೊಳಚೆಯಿಂದ ನೈರ್ಮಲ್ಯ ಕಾರ್ಮಿಕರ ಸಾವು ಮತ್ತು ಹಾನಿಗಳನ್ನು ತಡೆಗಟ್ಟುವ ಸಲುವಾಗಿ ನಗರಗಳು ತಮ್ಮ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಕಾರ್ಯಾಚರಣೆಗಳನ್ನು ಯಾಂತ್ರಿಕಗೊಳಿಸುವಂತೆ ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸಚಿವಾಲಯವು ಕಳೆದ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನದ ಸಂದರ್ಭದಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳ ಅಪಾಯಕಾರಿ ಶುಚಿಗೊಳಿಸುವ ಅಭ್ಯಾಸವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಸಫಾಯಿಮಿತ್ರ ಸುರಕ್ಷಾ ಚಾಲೆಂಜ್ ಅನ್ನು ಪ್ರಾರಂಭಿಸಿತ್ತು.
ಸ್ವಚ್ಛ ಸರ್ವೇಕ್ಷನ್ 2022 ರ ಚಾಲನೆ ವೇಳೆ, ಸಚಿವಾಲಯವು ಸವಾಲಿನ ಕ್ಷೇತ್ರ ಮೌಲ್ಯಮಾಪನಗಳಿಗೆ ಕೂಡ ಚಾಲನೆ ನೀಡಿದೆ. ಹಲವಾರು ಪ್ರಶಸ್ತಿಗಳು ಮತ್ತು ವಿತ್ತೀಯ ಪ್ರೋತ್ಸಾಹವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
10 ಲಕ್ಷ ಜನಸಂಖ್ಯೆಯ ನಗರಗಳಿಗೆ ಪ್ರಥಮ ಬಹುಮಾನ 12 ಕೋಟಿ ರೂಪಾಯಿ, ಮೂರರಿಂದ ಹತ್ತು ಲಕ್ಷ ಜನಸಂಖ್ಯೆಗೆ ಮೊದಲ ಬಹುಮಾನ 10 ಕೋಟಿ ರೂಪಾಯಿ ಮತ್ತು ಮೂರು ಲಕ್ಷ ರೂಪಾಯಿವರೆಗೆ ಮೊದಲ ಬಹುಮಾನ ಎಂಟು ಕೋಟಿ ರೂಪಾಯಿ. ಇದಲ್ಲದೆ, ಎರಡು ಉನ್ನತಕಾರ್ಯನಿರ್ವಹಣೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೆಮೆಂಟೋ ಮತ್ತು ಶೀಲ್ಡ್ ಮೂಲಕ ಗುರುತಿಸಲಾಗುತ್ತದೆ ಮತ್ತು ಪ್ರತಿ ಜನಸಂಖ್ಯೆಯ ವರ್ಗದಲ್ಲಿ 4 ಮತ್ತು 5 ನೇ ಸ್ಥಾನ ಪಡೆದ ನಗರಗಳನ್ನು ಸಹ ಗುರುತಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.