ನವದೆಹಲಿ: ದೀಪಾವಳಿಯ ಸಮಯದಲ್ಲಿ ಪಟಾಕಿ ನಿಷೇಧದ ಕುರಿತುಚರ್ಚೆ ನಡೆಯುವುದು ಸರ್ವೇ ಸಾಮಾನ್ಯ. ಹೆಚ್ಚಿನ ಜನರಿಗೆ ಈ ಸಂದರ್ಭದಲ್ಲೇ ವಾಯು ಮಾಲಿನ್ಯದ ಬಗೆಗೆ ಅತೀವ ಕಾಳಜಿ ಉಂಟಾಗುತ್ತದೆ. ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರುಗಳು ವಾಯು ಮಾಲಿನ್ಯದ ಈ ಭೀತಿಗೆ ಪರ್ಯಾಯ ಪರಿಹಾರವನ್ನು ನೀಡಿದ್ದಾರೆ.
ಮಕ್ಕಳು ದೀಪಾವಳಿ ಹಬ್ಬವನ್ನು ಆನಂದಿಸಲಿ. ಪಟಾಕಿ ಸಂಭ್ರಮವನ್ನು ಅವರಿಂದ ಕಿತ್ತುಕೊಳ್ಳಬೇಡಿ. ಮಕ್ಕಳಿಗಾಗಿ ದೊಡ್ಡವರು ತ್ಯಾಗ ಮಾಡಲಿ ಮತ್ತು ಕಛೇರಿಗೆ ಮೂರು ದಿನ ನಡೆದುಕೊಂಡು ಹೋಗಲಿ ಎಂದು ಸದ್ಗುರು ಹೇಳಿದ್ದಾರೆ.
ಬೆಳಕಿನ ಹಬ್ಬಕ್ಕೆ ಮುಂಚಿತವಾಗಿ ಸದ್ಗುರುಗಳು ಬುಧವಾರ ಟ್ವಿಟ್ ಮಾಡಿ, “ನಾನು ಕೆಲವು ವರ್ಷಗಳಿಂದ ಪಟಾಕಿಯನ್ನು ಹೊತ್ತಿಸಿಲ್ಲ. ಆದರೆ ನಾನು ಚಿಕ್ಕವನಿದ್ದಾಗ ಅದು ದೊಡ್ಡ ಸಂಭ್ರಮವಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ನಾವು ಪಟಾಕಿಗಳ ಕನಸು ಕಾಣಲಾರಂಭಿಸುತ್ತಿದ್ದೆವು ಮತ್ತು ದೀಪಾವಳಿ ಮುಗಿದ ನಂತರ ಮುಂದಿನ ಒಂದು-ಎರಡು ತಿಂಗಳುಗಳಿಗಾಗಿ ನಾವು ಪಟಾಕಿಗಳನ್ನು ಉಳಿಸುತ್ತಿದ್ದೆವು” ಎಂದಿದ್ದಾರೆ.
” ದೀಪಾವಳಿಯಲ್ಲಿ ವಾಯುಮಾಲಿನ್ಯದ ಕಾರಣಕ್ಕೆ ಮಕ್ಕಳನ್ನು ಪಟಾಕಿ ಹೊಡೆಯದಂತೆ ಮಾಡಬಾರದು. ದೊಡ್ಡವರು ಮಕ್ಕಳಿಗಾಗಿ ತ್ಯಾಗ ಮಾಡಿ. ನೀವು ಪಟಾಕಿ ಹೊಡೆಯಬೇಡಿ, ಮಕ್ಕಳು ಪಟಾಕಿ ಹೊಡೆಯಲಿ, ನೀವು ಮೂರು ದಿನ ಕಛೇರಿಗೆ ನಡೆದುಕೊಂಡೇ ಹೋಗಿ ಕಾರು ತೆಗೆದುಕೊಂಡು ಹೋಗಬೇಡಿ” ಎಂದಿದ್ದಾರೆ.
Concern about air pollution is not a reason to prevent kids from experiencing the joy of firecrackers. As your sacrifice for them, walk to your office for 3 days. Let them have the fun of bursting crackers. -Sg #Diwali #DontBanCrackers pic.twitter.com/isrSZCQAec
— Sadhguru (@SadhguruJV) November 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.