ಲಕ್ನೋ: ಉತ್ತರ ಪ್ರದೇಶದ 26 ಜಿಲ್ಲೆಗಳ 4,200 ಕ್ಕೂ ಹೆಚ್ಚು ಮಹಿಳಾ ಕರಕುಶಲಕರ್ಮಿಗಳು ಮತ್ತು ನೇಕಾರರು ಶನಿವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೂ ಮುನ್ನ ಇವರ ಸೇರ್ಪಡೆ ಮಹತ್ವಪಡೆದುಕೊಂಡಿದೆ.
“ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮನ್ನು ತಾವು ಮತ್ತು ಹೊಸ ರೂಪದಲ್ಲಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆದರೆ, ವ್ಯತ್ಯಾಸವೆಂದರೆ ಅವರು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಮತ್ತು ನಾವು ಸಮಾಜದ ಕಲ್ಯಾಣಕ್ಕಾಗಿ ನಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದೇವೆ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
“ಯುಪಿಯಲ್ಲಿ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಯುಪಿ ಮಹಿಳೆಯರು ಅನುಭವಿಸಿದ ಕಿರುಕುಳವನ್ನು ಯಾರೂ ಮರೆತಿಲ್ಲ. ಹುಡುಗರು ತಪ್ಪುಗಳನ್ನು ಮಾಡುತ್ತಾರೆ (ಲಡ್ಕೆ ಹೆ, ಲಡ್ಕೋ ಸೇ ತೊ ಗಲ್ತಿ ಹೋ ಜಾತಿ ಹೆ) ಎಂದು ಹೇಳುವ ಧೈರ್ಯವನ್ನು ಅವರು ಮಾಡಿದ್ದರು” ಎಂದು ಇರಾನಿ ಹೇಳಿದ್ದಾರೆ.
“ಈ ಹಿಂದೆ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಡಲು ಯಾವ ಸರ್ಕಾರ ಮುಂದಾಗಿರಲಿಲ್ಲ, ಇದರಿಂದ ಸೂರ್ಯಾಸ್ತದ ನಂತರ ಪ್ರಕೃತಿಯ ಕರೆಗೆ ಮಹಿಳೆಯರು ಹೊರಹೋಗಬೇಕಿತ್ತು. ಇದನ್ನು ಮಹಿಳೆಯರು ಮರೆತಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಹೇಳಿದ್ದಾರೆ.
ಮಹಿಳೆಯರು ಮೊದಲು ಪೊಲೀಸ್ ಠಾಣೆಗಳಿಗೆ ಹೋಗಲು ಹೆದರುತ್ತಿದ್ದರು, ಆದರೆ ಈಗ ಪ್ರತಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳಿವೆ. ಆ್ಯಂಟಿ ರೋಮಿಯೋ ಸ್ಕ್ವಾಡ್ಗಳು ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷಕ್ಕೆ ಸೇರಲು ಮಹಿಳೆಯರನ್ನು ಪ್ರೇರೇಪಿಸಿದ ಇರಾನಿ, ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ 6.25 ಕೋಟಿಗೂ ಹೆಚ್ಚು ಜನರಿಗೆ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ನೀಡಿದೆ ಎಂದು ಹೇಳಿದರು.
ಸಂಘಟನೆಯಿಂದ ಸರ್ಕಾರದವರೆಗೆ, ಸಮಾಜದ ಪ್ರತಿಯೊಂದು ಭಾಗವನ್ನು ಸಬಲೀಕರಣಗೊಳಿಸಲು ಪಕ್ಷವು ಪ್ರಯತ್ನಿಸುತ್ತಿದೆ ಎಂದರು.
ಯುಪಿ ಬಿಜೆಪಿಯ ಕುಶಲಕರ್ಮಿ ಮತ್ತು ನೇಕಾರ ಘಟಕದ ಸಹ ಸಂಚಾಲಕ ಕ್ಷಿಪ್ರಾ ಶುಕ್ಲಾ ಮಾತನಾಡಿ, “ಪ್ರತಿಯೊಬ್ಬ ಮಹಿಳೆ ತನ್ನಲ್ಲಿ ದುರ್ಗಾದೇವಿಯನ್ನು ಮೈಗೂಡಿಸಿಕೊಂಡಿದ್ದಾಳೆ, ಅವಳು ಯಾವುದೇ ಕೆಲಸವನ್ನು ಕೈಯಲ್ಲಿ ಮಾಡಬಲ್ಲಳು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದೂರದೃಷ್ಟಿಯ ಅಡಿಯಲ್ಲಿನ ಉಪಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ” ಎಂದಿದ್ದಾರೆ.
ಮಹಿಳೆಯರು ಮತ್ತು ಸಂಸ್ಥೆಗಳ ನಡುವೆ ನೇರ ಸಂವಹನವನ್ನು ಸ್ಥಾಪಿಸಲು ಇರಾನಿ ‘ಹಲೋ ಕಮಲ್ ಶಕ್ತಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.