ನವದೆಹಲಿ: ಇಂದು ದೇಶದ ಪ್ರಥಮ ಗೃಹಸಚಿವ, ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146 ನೇ ಜನ್ಮದಿನವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ಕಿನ ಮನುಷ್ಯನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, ” ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನನ್ನ ನಮ್ರ ನಮನಗಳು. ದೇಶದ ಏಕತೆಯ ಸಂಕೇತವಾದ ಸರ್ದಾರ್ ಪಟೇಲ್ ಅವರು ನಮ್ಮ ಅಗ್ರಗಣ್ಯ ರಾಷ್ಟ್ರನಿರ್ಮಾಪಕರಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ. ನೈತಿಕತೆ ಮತ್ತು ರಾಷ್ಟ್ರ ಸೇವೆಯ ಆಧಾರದ ಮೇಲೆ ಕೆಲಸದ ಸಂಸ್ಕೃತಿಯನ್ನು ಸ್ಥಾಪಿಸಿದ್ದಕ್ಕಾಗಿ ಭಾರತದ ನಾಗರಿಕರು ಅವರಿಗೆ ಯಾವಾಗಲೂ ಋಣಿಯಾಗಿರುತ್ತಾರೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ “ಸರ್ದಾರ್ ಪಟೇಲ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದರು ಮತ್ತು ಭಾರತವು ಸಮರ್ಥ, ಅಂತರ್ಗತ, ಸೂಕ್ಷ್ಮ, ಎಚ್ಚರಿಕೆ, ವಿನಮ್ರ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ಬಯಸಿದ್ದರು” ಎಂದು ಹೇಳಿದ್ದಾರೆ.
लौह पुरुष सरदार वल्लभभाई पटेल की जयंती पर राष्ट्रपति राम नाथ कोविन्द ने पटेल चौक, नई दिल्ली स्थित सरदार पटेल की प्रतिमा पर उन्हें श्रद्धा-सुमन अर्पित किए। pic.twitter.com/VuOOnVxsXk
— President of India (@rashtrapatibhvn) October 31, 2021
A tribute to the great Sardar Patel. https://t.co/P2eUmvo61n
— Narendra Modi (@narendramodi) October 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.