ನವದೆಹಲಿ: ಗುಡ್ಡಗಾಡು ಪ್ರದೇಶಗಳು, ಈಶಾನ್ಯ ರಾಜ್ಯಗಳು ಮತ್ತು ಬುಡಕಟ್ಟು ಪ್ರದೇಶಗಳಿಂದ ಬೇಗ ಕೆಡುವ ಆಹಾರ ಉತ್ಪನ್ನಗಳನ್ನು ತ್ವರಿತವಾಗಿ ದೇಶದ ಇತರ ಭಾಗಕ್ಕೆ ಸಾಗಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಕೃಷಿ ಉಡಾನ್ 2.0 ಯೋಜನೆಗೆ ಚಾಲನೆ ನೀಡಿದರು.
ಸರ್ಕಾರದ ಕೃಷಿ ಉಡಾನ್ ಯೋಜನೆಯು ವಾಯು ಸಾರಿಗೆಯ ಮೂಲಕ ಕೃಷಿ-ಉತ್ಪನ್ನಗಳ ಸಾಗಾಣೆಯನ್ನು ಸುಲಭಗೊಳಿಸುತ್ತದೆ ಮತ್ತು ಉತ್ತೇಜಿಸುತ್ತದೆ.
ಕೃಷಿ ಉಡಾನ್ 2.0 ಕೃಷಿ-ಕೊಯ್ಲು ಮತ್ತು ವಾಯು ಸಾರಿಗೆಯ ಉತ್ತಮ ಏಕೀಕರಣ ಮತ್ತು ಆಪ್ಟಿಮೈಸೇಶನ್ ಮೂಲಕ ಉತ್ಪನ್ನಗಳ ಮೌಲ್ಯವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ ಮತ್ತು ವಿಭಿನ್ನ ಮತ್ತು ಕ್ರಿಯಾತ್ಮಕ ಪರಿಸ್ಥಿತಿಗಳಲ್ಲಿ ಕೃಷಿ ಮೌಲ್ಯ ಸರಣಿ ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯೋಜನೆಯನ್ನು ಪ್ರಾರಂಭಿಸಿ ಮಾತನಾಡಿದ ಸಿಂಧಿಯಾ, “ಕೃಷಿ ಉಡಾನ್ 2.0 ದೇಶದಲ್ಲಿ ಕೃಷಿ ಆಹಾರ ತ್ಯಾಜ್ಯಗಳ ವ್ಯರ್ಥ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
मुझे बहुप्रतीक्षित कृषि UDAN योजना का रोडमैप जारी करने का अवसर प्राप्त हुआ। इस योजना का उद्देश्य किसानों के लिए बेहतर आय और आजीविका सुनिश्चित करने की दिशा में नागरिक उड्डयन की मदद से भारतीय कृषि की अपार संभावनाओं को चैनलाइज करना है। #KrishiUDAN2 pic.twitter.com/KVARrle0w4
— Jyotiraditya M. Scindia (@JM_Scindia) October 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.