ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಬಾಹ್ಯಾಕಾಶ ವಲಯ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಇಂದು ನಡೆಯುತ್ತಿರುವ ಪ್ರಮುಖ ಸುಧಾರಣೆಗಳಿಗೆ ನಿರ್ಣಾಯಕ, ದೃಢ ಸರ್ಕಾರ ಕಾರಣ” ಎಂದು ಹೇಳಿದ್ದಾರೆ.
“ಬಾಹ್ಯಾಕಾಶ ವಲಯ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಅಭೂತಪೂರ್ವವಾಗಿದೆ ಮತ್ತು ಬಾಹ್ಯಾಕಾಶ ಸುಧಾರಣೆಗಳ ವಿಷಯದಲ್ಲಿ ಸರ್ಕಾರದ ವಿಧಾನವು 4 ಸ್ತಂಭಗಳನ್ನು ಆಧರಿಸಿದೆ. ಖಾಸಗಿಯವರಿಗೆ ನಾವೀನ್ಯತೆಯ ಸ್ವಾತಂತ್ರ್ಯವು ಮೊದಲ ಆಧಾರ ಸ್ತಂಭವಾಗಿದೆ ಮತ್ತು ಸರ್ಕಾರದ ಶಕ್ತಿಯು ಎರಡನೆಯದ್ದಾಗಿದೆ. ಭವಿಷ್ಯಕ್ಕಾಗಿ ಯುವಕರನ್ನು ಸಿದ್ಧಪಡಿಸುವುದು ಮತ್ತು ಸಾಮಾನ್ಯ ಮನುಷ್ಯನ ಪ್ರಗತಿಗೆ ಸಂಪನ್ಮೂಲವಾಗಿ ಬಾಹ್ಯಾಕಾಶ ಕ್ಷೇತ್ರವನ್ನು ನೋಡುವುದು ಇತರ ಎರಡು ಆಧಾರ ಸ್ತಂಭಗಳು ಎಂದಿದ್ದಾರೆ.
“ಭಾರತದ ದೃಷ್ಟಿಕೋನವು ಸ್ಪಷ್ಟವಾಗಿದೆ ಮತ್ತು ಈ ದೃಷ್ಟಿಕೋನ ಆತ್ಮನಿರ್ಭರ ಭಾರತವಾಗಿದೆ. ಏಕೆಂದರೆ ಇಂದು ದೇಶವು ಕ್ರಿಯಾತ್ಮಕ ಸುಧಾರಣೆಗಳನ್ನು ನೋಡುತ್ತಿದೆ. ಇದು ಕೇವಲ ದೃಷ್ಟಿಕೋನವಲ್ಲ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರ ಮತ್ತು ನಾವೀನ್ಯತೆ ಕೇಂದ್ರವನ್ನಾಗಿ ಮಾಡುವ ಉತ್ತಮ ಚಿಂತನೆ, ಯೋಜಿತ ಸಮಗ್ರ ಆರ್ಥಿಕ ತಂತ್ರ” ಎಂದು ಅವರು ಹೇಳಿದರು.
ಈ ತಂತ್ರವು ಭಾರತದ ತಾಂತ್ರಿಕ ಪರಿಣತಿಯನ್ನು ಆಧರಿಸಿ ಭಾರತವನ್ನು ಜಾಗತಿಕ ಆವಿಷ್ಕಾರಗಳ ಕೇಂದ್ರವನ್ನಾಗಿಸುತ್ತದೆ ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಗಮನವು ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ, ಜೊತೆಗೆ ಅದನ್ನು ಸಾಮಾನ್ಯ ಜನರಿಗೆ ತಲುಪಿಸುವುದಾಗಿದೆ. ಕಳೆದ ಏಳು ವರ್ಷಗಳಲ್ಲಿ, ಎನ್ಡಿಎ ಸರ್ಕಾರವು ಬಾಹ್ಯಾಕಾಶ ತಂತ್ರಜ್ಞಾನವನ್ನು ಕೊನೆಯ ಮೈಲಿ ವಿತರಣೆ ಮತ್ತು ಪಾರದರ್ಶಕ ಆಡಳಿತಕ್ಕೆ ಪ್ರಮುಖ ಸಾಧನವಾಗಿ ಮಾಡಿದೆ ಎಂದರು.
ಭಾರತದ ಬಾಹ್ಯಾಕಾಶ ಕ್ಷೇತ್ರವು 130 ಕೋಟಿ ಜನರ ಪ್ರಗತಿಗೆ ಒಂದು ದೊಡ್ಡ ಮಾಧ್ಯಮವಾಗಿದೆ. ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, ಭಾರತವು ಯಾವ ಉತ್ತುಂಗದಲ್ಲಿರುತ್ತದೆ ಎಂಬುದಕ್ಕೆ ನಮ್ಮ ನಿಮ್ಮೆಲ್ಲರ ಕೊಡುಗೆ ಅತ್ಯಮೂಲ್ಯವಾಗಿರುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
जब भारत अपनी आजादी के 100 वर्ष मनाएगा, तो भारत जिस ऊंचाई पर होगा आप सभी का, हम सभी का योगदान महत्वपूर्ण होगा- पीएम श्री @narendramodi pic.twitter.com/q0vjuzrYL1
— BJP (@BJP4India) October 11, 2021
ಭಾರತೀಯ ಬಾಹ್ಯಾಕಾಶ ಸಂಘದ (ಐಎಸ್ಪಿಎ) ಕುರಿತು
ʻಐಎಸ್ಪಿಎʼ – ಇದು ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳ ಪ್ರಮುಖ ಉದ್ಯಮ ಸಂಘವಾಗಿದ್ದು, ಭಾರತೀಯ ಬಾಹ್ಯಾಕಾಶ ಉದ್ಯಮದ ಸಾಮೂಹಿಕ ಧ್ವನಿಯಾಗಲು ಬಯಸುತ್ತದೆ. ಇದು ಬಾಹ್ಯಾಕಾಶ ಕ್ಷೇತ್ರದ ನೀತಿಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತದೆ ಹಾಗೂ ಸರಕಾರ ಮತ್ತು ಅದರ ಅಧೀನ ಸಂಸ್ಥೆಗಳು (ಏಜೆನ್ಸಿಗಳು) ಸೇರಿದಂತೆ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿನ ಎಲ್ಲಾ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಳ್ಳುತ್ತದೆ. ಪ್ರಧಾನಮಂತ್ರಿಯವರ ʻಆತ್ಮನಿರ್ಭರ ಭಾರತʼ ದೃಷ್ಟಿಕೋನವನ್ನು ಪ್ರತಿಧ್ವನಿಸುವ ʻಐಎಸ್ಪಿಎʼ, ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿದ ಮತ್ತು ಬಾಹ್ಯಾಕಾಶ ರಂಗದಲ್ಲಿ ಪ್ರಮುಖ ದೇಶವನ್ನಾಗಿ ಮಾಡಲು ನೆರವು ನೀಡುತ್ತದೆ.
ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನಗಳಲ್ಲಿ ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ಪ್ರಮುಖ ದೇಶೀಯ ಮತ್ತು ಜಾಗತಿಕ ಸಂಸ್ಥೆಗಳನ್ನು ʻಐಎಸ್ಪಿಎʼ ಪ್ರತಿನಿಧಿಸುತ್ತದೆ. ಇದರ ಸ್ಥಾಪಕ ಸದಸ್ಯರಲ್ಲಿ ʻಲಾರ್ಸನ್ & ಟಬ್ರೊ, ನೆಲ್ಕೊ (ಟಾಟಾ ಗ್ರೂಪ್), ಒನ್ವೆಬ್, ಭಾರ್ತಿ ಏರ್ಟೆಲ್, ಮಾಪ್ ಮೈ ಇಂಡಿಯಾ, ವಾಲ್ಚಂದ್ ನಗರ್ ಇಂಡಸ್ಟ್ರೀಸ್ ಮತ್ತು ಅನಂತ ಟೆಕ್ನಾಲಜಿ ಲಿಮಿಟೆಡ್ ಸೇರಿವೆ. ಗೋದ್ರೇಜ್, ಹ್ಯೂಸ್ ಇಂಡಿಯಾ, ಅಜಿಸ್ಟಾ-ಬಿಎಸ್ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟಮ್ ಎಲೆಕ್ಟ್ರಾನಿಕ್ಸ್, ಮ್ಯಾಕ್ಸರ್ ಇಂಡಿಯಾ – ಇವು ಇತರ ಪ್ರಮುಖ ಸದಸ್ಯರಲ್ಲಿ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.