ಲಕ್ನೋ: ಉತ್ತರ ಪ್ರದೇಶ ಸರ್ಕಾರವು ಬುಧವಾರ ಲಕ್ನೋದಲ್ಲಿ ಮಿಷನ್ ಶಕ್ತಿ – ಹಂತ 3 ರ ಅಡಿಯಲ್ಲಿ ‘ನಿರ್ಭಯಾ – ಏಕ್ ಪಹಲ್’ ಕಾರ್ಯಕ್ರಮವನ್ನು ಆರಂಭಿಸಿದೆ.
ಕಾರ್ಯಕ್ರಮವನ್ನು ಪ್ರಾರಂಭಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, 75,000 ಮಹಿಳೆಯರು ಸ್ಟೇಟ್ ಬ್ಯಾಂಕುಗಳೊಂದಿಗೆ ಸಂಪರ್ಕ ಹೊಂದಲಿದ್ದಾರೆ, ಅಗ್ಗದ ಬಡ್ಡಿದರದಲ್ಲಿ ಸಾಲಗಳನ್ನು ಪಡೆಯುತ್ತಾರೆ ಮತ್ತು ಮೂರು ತಿಂಗಳುಗಳವರೆಗೆ ಪಿಎಂ ಮುದ್ರಾ ಯೋಜನೆಯಡಿ ರಾಜ್ಯ ಸಬ್ಸಿಡಿಗಳ ಲಾಭವನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದರು.
“2017 ಕ್ಕಿಂತ ಮೊದಲು ಗೊಂದಲದ ವಾತಾವರಣವಿತ್ತು. ಕುಟುಂಬಗಳು ತಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರು ಮನೆಯಿಂದ ಹೊರಬರುವುದನ್ನು ಕಂಡು ಹೆದರುತ್ತಿದ್ದರು. ಸಮಸ್ಯೆಯನ್ನು ಎದುರಿಸಲು ನಾವು ಮೊದಲು ಆಂಟಿ-ರೋಮಿಯೋ ತಂಡಗಳನ್ನು ಪರಿಚಯಿಸಿದೆವು. ನಮ್ಮ ಉಪಕ್ರಮಗಳ ಮೂಲಕ ನಾವು ಅನೇಕ ಗುರಿಗಳನ್ನು ಸಾಧಿಸಿದ್ದೇವೆ” ಎಂದು ಸಿಎಂ ಯೋಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹಿಳೆಯರ ಸಾಧನೆಗಳನ್ನು ಪಟ್ಟಿ ಮಾಡಿದ ಆದಿತ್ಯನಾಥ್, “ಯುಪಿ ಪೊಲೀಸ್ ಪಡೆ 2017 ರ ಮೊದಲು ಅತ್ಯಲ್ಪ ಮಹಿಳಾ ಸಿಬ್ಬಂದಿಯನ್ನು ಹೊಂದಿತ್ತು. ನಮ್ಮಲ್ಲಿ ಈಗ 30,000 ಮಹಿಳಾ ಕಾನ್ಸ್ಟೇಬಲ್ ಗಳಿದ್ದಾರೆ. ಮಹಿಳೆಯರು ರೆಡಿಮೇಡ್ ಉಡುಪುಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದ್ದಾರೆ ಮತ್ತು ಯುಪಿ ಇದರ ಹಬ್ ಆಗಬೇಕು ಎಂದು ನಾವು ಬಯಸುತ್ತೇವೆ. ನಾವು ಅವರಿಗೆ ಅಗತ್ಯವಾದ ಸರಬರಾಜುಗಳನ್ನು ಒದಗಿಸಿದರೆ, ಅವರು ವಿಯೆಟ್ನಾಂ ಮತ್ತು ಚೀನಾವನ್ನು ಹಿಂದಿಕ್ಕುತ್ತಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.