
ಶ್ರೀನಗರ: ವಿಶೇಷ ಮಿಲಿಟರಿ ರೈಲಿನ ಮೂಲಕ ಟ್ಯಾಂಕ್ಗಳು ಮತ್ತು ಫಿರಂಗಿ ಬಂದೂಕುಗಳನ್ನು ಕಾಶ್ಮೀರ ಕಣಿವೆಗೆ ಸಾಗಿಸುವ ಮೂಲಕ ಭಾರತೀಯ ಸೇನೆಯು ಒಂದು ಪ್ರಮುಖ ಲಾಜಿಸ್ಟಿಕ್ಸ್ ಮೈಲಿಗಲ್ಲನ್ನು ಸಾಧಿಸಿದೆ. ಇದು ಉತ್ತರ ಗಡಿಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬಹುದೊಡ್ಡ ಶಕ್ತಿಯನ್ನು ತುಂಬಲಿದೆ.
ಡಿಸೆಂಬರ್ 16 ರಂದು ವಿಶೇಷ ಮಿಲಿಟರಿ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್ಗಳು, ಆರ್ಟಿಲರಿ ಗನ್ಗಳು ಮತ್ತು ಎಂಜಿನಿಯರಿಂಗ್ ಉಪಕರಣಗಳನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. ಜಗತ್ತಿನ ಅತಿ ಎತ್ತರದ ರೈಲು ಆರ್ಚ್ ಬ್ರಿಡ್ಜ್ ಆದ ಚೇನಾಬ್ ನದಿಯ ಮೇಲಿನ ಹೊಸದಾಗಿ ಉದ್ಘಾಟನೆಯಾದ ಸೇತುವೆಯ ಮೂಲಕ ಈ ಸಾಗಾಟ ನಡೆದಿದೆ. ಇದು ಕಣಿವೆ ಪ್ರದೇಶಕ್ಕೆ ಭಾರೀ ಸೈನಿಕ ಉಪಕರಣಗಳ ಮೊದಲ ಬೃಹತ್ ಪ್ರಮಾಣದ ರೈಲು ಸಾಗಾಟವಾಗಿದೆ.
ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (USBRL) ಯೋಜನೆಯಡಿ ನಿರ್ಮಿತವಾದ ಈ ಚೇನಾಬ್ ಸೇತುವೆಯು ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿದ್ದು, ಈಫಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. ಈ ಯೋಜನೆಯು ಹಿಮಾಲಯದ ಕಠಿಣ ಭೂಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಎಲ್ಲಾ ಹವಾಮಾನದಲ್ಲೂ ಸಂಪರ್ಕ ಒದಗಿಸುತ್ತದೆ, ಹಿಮಪಾತ ಅಥವಾ ಭೂಕುಸಿತದಿಂದಾಗುವ ರಸ್ತೆ ಅಡಚಣೆಗಳನ್ನು ತಪ್ಪಿಸುತ್ತದೆ.
ಇದರ ಮೂಲಕ ವಿಶೇಷ ಮಿಲಿಟರಿ ರೈಲಿನ ಕಾರ್ಯಾಚರಣೆಯು ಸೇನೆಯ ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಿದ್ದು, ತ್ವರಿತ ಮೊಬಿಲೈಸೇಷನ್ ಮತ್ತು ಉತ್ತರ ಗಡಿಗಳಲ್ಲಿ ಕಾರ್ಯತಂತ್ರದ ಸಿದ್ಧತೆಯನ್ನು ಬಲಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


