ಅಯೋಧ್ಯೆ: ರಾಮ ಮಂದಿರದ ಅಡಿಪಾಯವನ್ನು ಪೂರ್ಣಗೊಳಿಸಿ, ಅದರ ಎತ್ತರವನ್ನು ಸಮುದ್ರ ಮಟ್ಟದಿಂದ 107 ಮೀಟರ್ಗಳಿಗೆ ಹೆಚ್ಚಿಸಿದ ನಂತರ, ಎರಡನೇ ಹಂತದ ನಿರ್ಮಾಣವು ಮಂಗಳವಾರ ರಾಮಜನ್ಮಭೂಮಿಯ ಉದ್ದೇಶಿತ ಗರ್ಭಗುಡಿಯಲ್ಲಿ ವಿಶೇಷ ಮಹೂರ್ತ ಪ್ರಾರ್ಥನೆಯ ನಂತರ ಪ್ರಾರಂಭವಾಯಿತು.
ಪ್ರಪ್ರಥಮ ಬಾರಿಗೆ, ಬ್ಲ್ಯಾಕ್ ಗ್ರಾನೈಟ್ಗಳನ್ನು ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಅರಣ್ಯದ ಕೊಳ್ಳೇಗಾಲ ಪ್ರದೇಶದ ಕಲ್ಲುಗಣಿಗಳಿಂದ ಶಿಖರವನ್ನು ನಿರ್ಮಿಸುವುದಕ್ಕಾಗಿ ಸಾಗಿಸಲಾಗಿದೆ, ಜೊತೆಗೆ ಮಿರ್ಜಾಪುರದಿಂದ ಕೆತ್ತಿದ ಕಲ್ಲುಗಳನ್ನು ಮತ್ತು ರಾಜಸ್ಥಾನದ ಬನ್ಸಿ ಪಹರ್ಪುರ್ನಿಂದ ಗುಲಾಬಿ ಅಮೃತಶಿಲೆಯನ್ನು ಪಡೆಯಲಾಗಿದೆ.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಮ ಮಂದಿರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, “ಗರ್ಭಗೃಹ ನಿರ್ಮಿಸಲು ಕಲ್ಲನ್ನು ಸ್ಥಾಪಿಸುವ ಮೊದಲು ವಿಶ್ವಕರ್ಮ ದೇವರನ್ನು ವೇದ ಪಠಣಗಳ ನಡುವೆ ಪೂಜಿಸಲಾಯಿತು. ಕೊಳ್ಳೇಗಾಲ ಮತ್ತು ಮಿರ್ಜಾಪುರದಿಂದ ಈಗಾಗಲೇ ಕಲ್ಲುಗಳ ಪೂರೈಕೆ ಆರಂಭವಾಗಿದೆ. ಮೂರು ದಶಕಗಳ ಹಿಂದೆ ಮಂದಿರಕ್ಕಾಗಿನ ಚಳುವಳಿಯ ಸಮಯದಲ್ಲಿ ಭಾರತದಾದ್ಯಂತ ವಿಎಚ್ಪಿ ಸಂಗ್ರಹಿಸಿದ 2 ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳನ್ನು ಈಗ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಟ್ರಸ್ಟ್ನ ಉನ್ನತ ಮೂಲಗಳು ತಿಳಿಸಿವೆ.
1989 ರಿಂದ, ರಾಮನ ಹೆಸರನ್ನು ಹೊಂದಿರುವ 3 ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳನ್ನು ಮಂದಿರಕ್ಕೆ ಬಳಸುವ ಪ್ರತಿಜ್ಞೆಯೊಂದಿಗೆ ಸಂಗ್ರಹಿಸಲಾಯಿತ್ತು, ಆದರೆ ನಂತರ ಅದನ್ನು ರಾಮಜನ್ಮಭೂಮಿ ನಿರ್ಮಾಣ ಕಾರ್ಯಾಲಯದಲ್ಲಿ ಸಂಗ್ರಹಿಸಿಡಲಾಯಿತು. ಇವುಗಳನ್ನು ಈಗ ಮಂದಿರ ನಿರ್ಮಾಣ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, “ರಾಮಜನ್ಮಭೂಮಿಯಲ್ಲಿ ಕರ ಸೇವಕರು 1989 ರ ‘ಶಿಲನ್ಯಾಸ’ ಸಮಯದಲ್ಲಿ ಒಂದು ಲಕ್ಷ ಕಲ್ಲುಗಳನ್ನು ಹಾಕಿದ್ದರ. ಹಳೆಯ ಕಾರ್ಯಾಗಾರದಲ್ಲಿ ಕನಿಷ್ಠ 2 ಲಕ್ಷ ಕಲ್ಲು ಉಳಿದಿದೆ, ಅದನ್ನು ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಇಟ್ಟಿಗೆಗಳು ಕೋಟ್ಯಂತರ ಭಾರತೀಯರ ನಂಬಿಕೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.