ಲಕ್ನೋ: ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್) ದೇಶದ ಅತಿದೊಡ್ಡ ಮತಾಂತರ ದಂಧೆಯನ್ನು ಬಯಲಿಗೆಳೆದಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮಗುರು ಮೌಲಾನಾ ಕಲೀಂ ಸಿದ್ದೀಕಿ ಎಂಬಾತನನ್ನು ಮೀರತ್ನಲ್ಲಿ ಬಂಧಿಸಿದೆ.
ಎಟಿಎಸ್ ಮಾಹಿತಿಯ ಪ್ರಕಾರ, ಧಾರ್ಮಿಕ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಲೀಂನನ್ನು ಬಂಧನಕ್ಕೊಳ ಪಡಿಸಲಾಗಿದೆ. ಕುಮಾರ್ ಗೌತಮ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಈತನ ಹೆಸರು ಮುನ್ನೆಲೆಗೆ ಬಂದಿದೆ. ಮತಾಂತರ ದಂಧೆಯನ್ನು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಉಮರ್ ಗೌತಮ್ನನ್ನು ಜೂನ್ ತಿಂಗಳಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
64 ವರ್ಷದ ಧರ್ಮಗುರು ಸಂಶಯಾಸ್ಪದ ಚಟುವಟಿಕೆಗಳ ಕಾರಣ ತನಿಖಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದ. ಮಂಗಳವಾರ ರಾತ್ರಿ ಈತ ಮೀರತ್ಗೆ ಆಗಮಿಸಿದ ತಕ್ಷಣವೇ ಈತನನ್ನು ಬಂಧಿಸಲಾಗಿದೆ. ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈತ ಮುನಿಯ ಮುಜಾಫರ್ನಗರದ ನಿವಾಸಿಯಾಗಿದ್ದು, ಜಾಮಿಯಾ ಇಮಾಮ್ ವಾಲಿಯುಲ್ಲಾಹ ಟ್ರಸ್ಟ್ ನಡೆಸುತ್ತಿದ್ದಾನೆ. ಇದರ ಮೂಲಕ ಅಪಾರ ವಿದೇಶಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿ, “ಮೌಲಾನಾ ಕಲೀಂ ಸಿದ್ದಿಕಿ ಟ್ರಸ್ಟ್ ಬಹರೇನ್ನಿಂದ 1.5 ಕೋಟಿ ಸೇರಿದಂತೆ ವಿದೇಶದಿಂದ 3 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದ ತನಿಖೆಗಾಗಿ ಎಟಿಎಸ್ನ ಆರು ತಂಡಗಳನ್ನು ರಚಿಸಲಾಗಿದೆ ” ಎಂದಿದ್ದಾರೆ.
ಈತನ ಟ್ರಸ್ಟ್ ಭಾರತದಲ್ಲಿ ಸುಮಾರು 1000 ಜನರನ್ನು ಮತಾಂತರ ಮಾಡಿದೆ ಎಂದು ಉತ್ತರ ಪ್ರದೇಶ ಎಟಿಎಸ್ ಇನ್ಸ್ಪೆಕ್ಟರ್ ಜನರಲ್ ಜಿಕೆ ಗೋಸ್ವಾಮಿ ಹೇಳಿದ್ದಾರೆ.
ಮುಫ್ತಿ ಖಾಜಿ ಜಹಾಂಗೀರ್ ಆಲಂ ಕಾಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಅನ್ನು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ನಿಂದ ಹಣ ಪಡೆದು ಕಿವುಡ ವಿದ್ಯಾರ್ಥಿಗಳು ಮತ್ತು ಬಡವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಕ್ಕಾಗಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ಜೂನ್ ನಲ್ಲಿ ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.