ಭುವನೇಶ್ವರ : ಭುವನೇಶ್ವರ ಮೂಲದ ಕಲಾವಿದರೊಬ್ಬರು ತೆಂಗಿನ ಚಿಪ್ಪನ್ನು ಬಳಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮೂಲಕ ಉದ್ಯಮಿಯಾಗಿ ಬದಲಾಗಿದ್ದಾರೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಎಸೆಯಲಾಗುವ ಚಿಪ್ಪನ್ನು ಬಳಸಿ ಇವರು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ.
41 ವರ್ಷದ ಕಲಾವಿದ ದೇವಿ ಪ್ರಶಾದ್ ದಶ್ ಅವರು ಕರಕುಶಲ ಪರಿಕರಗಳು, ಪ್ರದರ್ಶನ ತುಣುಕುಗಳು ಮತ್ತು ಇತರ ಗೃಹಾಲಂಕಾರ ವಸ್ತುಗಳನ್ನು ಚಿಪ್ಪಿನಿಂದ ತಯಾರಿಸುತ್ತಾರೆ. ದೂರದ ಪ್ರದೇಶಗಳಲ್ಲಿರುವ ಜನರಿಗೆ ತಮ್ಮ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ತರಬೇತಿಯನ್ನು ನೀಡುತ್ತಾರೆ. ಅವರು ಎಂಎಸ್ಎಂಇ ಕೂಡ ಸ್ಥಾಪಿಸಿದ್ದಾರೆ.
ಈ ಪ್ರತಿಕ್ರಿಯೆ ನೀಡಿರುವ ಕಲಾವಿದ ದೇವಿ ಪ್ರಶಾದ್ ದಶ್ ಅವರು “ಪ್ರತಿದಿನ, ಒಡಿಶಾದಾದ್ಯಂತ ದೇವಸ್ಥಾನಗಳು ಎಸೆಯುವ ದೊಡ್ಡ ಪ್ರಮಾಣದ ತೆಂಗಿನ ಚಿಪ್ಪುಗಳನ್ನು ನಾನು ಅಲಂಕಾರಿಕ ಮತ್ತು ಉಪಯುಕ್ತ ಉತ್ಪನ್ನಗಳನ್ನು ತಯಾರಿಸಲು ಬಳಸುತ್ತೇನೆ” ಎಂದಿದ್ದಾರೆ.
ದೇವಾಲಯ ಬಳಸಿದ ತೆಂಗಿನ ಚಿಪ್ಪುಗಳನ್ನು ಬಳಸುವ ಮೂಲಕ ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸುವ ಮೂಲಕ ಪರಿಸರವನ್ನು ರಕ್ಷಿಸುವ ತನ್ನ ಉತ್ಸಾಹವನ್ನು ಅವರು ವಿವರಿಸಿದರು.
ಅವರು 2011 ರಲ್ಲಿ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು ಮತ್ತು ತರಬೇತಿ ಘಟಕಗಳನ್ನು ಸ್ಥಾಪಿಸುವ ಮೂಲಕ ತಮ್ಮ ಕೆಲಸವನ್ನು ಮತ್ತಷ್ಟು ವಿಸ್ತರಿಸಿದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
“ಎಂಎಸ್ಎಂಇನಲ್ಲಿ ನೋಂದಾಯಿಸಿಕೊಂಡಿದ್ದೇನೆ ಮತ್ತು ಪ್ರದರ್ಶನಗಳಲ್ಲಿ ಸ್ಟಾಲ್ಗಳನ್ನು ಸ್ಥಾಪಿಸುವ ಅವಕಾಶವನ್ನೂ ಪಡೆದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.