ಹೈದರಾಬಾದ್: ಪ್ರತಿನಿತ್ಯ ಹೈದರಾಬಾದ್ನತ್ತ ಕಾರು ಚಲಾಯಿಸುವ ಗಂಗಾಧರ್, ಅಲ್ಲಿ ಸುತ್ತಾಡಿ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಮುಚ್ಚುತ್ತಾರೆ. ಇದುವರೆಗೆ ಅವರು ಮುಚ್ಚಿದ ಹೊಂಡಗಳ ಸಂಖ್ಯೆ ಬರೋಬ್ಬರಿ 1,100. ಇದಕ್ಕಾಗಿ ಇವರು ಖರ್ಚು ಮಾಡಿದ್ದು ತಮ್ಮ ಪೆನ್ಶನ್ ಹಣವನ್ನು.
67 ವರ್ಷದ ನಿವೃತ್ತ ರೈಲ್ವೇ ಉದ್ಯೋಗಿ ಗಂಗಾಧರ ತಿಲಕ್ ಕತ್ನಮ್ ತಮ್ಮ ಜೀವನ ಬಹುಪಾಲು ಸೇವೆಯಲ್ಲಿಯೇ ಕಳೆದಿದ್ದಾರೆ. ನಿವೃತ್ತರಾದ ಬಳಿಕ ಜೀವನವನ್ನು ಎಂಜಾಯ್ ಮಾಡುವ, ಕುಟುಂಬ, ಸ್ನೇಹಿತದೊಂದಿಗೆ ಕಾಲಕಳೆಯುವ ಅವಕಾಶ ಇವರಿಗಿದೆ.
ಆದರೆ ಗಂಗಾಧರ್ ಸಾಮಾನ್ಯ ವ್ಯಕ್ತಿಯಲ್ಲ, ಅವರು ಕಾರ್ಯದಲ್ಲಿ ನಂಬಿಕೆಯಿಟ್ಟ ವ್ಯಕ್ತಿ, ಅವರ ಗುರಿ ಗುಂಡಿ ಬಿದ್ದ ಭಾರತದ ರಸ್ತೆಗಳನ್ನು ಮುಚ್ಚುವುದು, ಅದಕ್ಕಾಗಿ ಪ್ರತಿನಿತ್ಯ ತನ್ನ ಕಾರಿನಲ್ಲಿ ಸಿಕ್ಕಿದ ಕಡೆ ಪ್ರಯಾಣಿಸುತ್ತಾರೆ. ಅಲ್ಲಿ ಗುಂಡಿಗಳು ಕಣ್ಣಿಗೆ ಬಿದ್ದರೆ ತಕ್ಷಣವೇ ಇಳಿದು ಅದರ ರಿಪೇರಿಗೆ ಮುಂದಾಗುತ್ತಾರೆ.
ಅವರ ಕಾರಿನ ಹಿಂದಿನ ಸೀಟಿನಲ್ಲಿ ಸದಾ ಗುಂಡಿ ಮುಚ್ಚುವ ಉಪಕರಣಗಳಿರುತ್ತವೆ. ತನ್ನ ಕಾರ್ಯದಲ್ಲಿ ಮಗ್ನರಾಗಿರುವ ಅವರು ಇದುವರೆಗೆ 1,100 ಅಪಾಯಕಾರಿ ಗುಂಡಿಗಳನ್ನು ಮುಚ್ಚಿದ್ದಾರೆ.
ಒಂದು ದಿನ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಗಂಗಾಧರ್ ಅವರು ನಿಯಂತ್ರಣ ತಪ್ಪಿ ರಸ್ತೆಯ ಗುಂಡಿಗೆ ಬಿದ್ದರು, ಇದರಿಂದ ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳ ಮೈಮೇಲೆ ಕೆಸರು ರಾಚಿತು. ಇದು ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿತು. ತಕ್ಷಣವೇ ಅವರು ಅಂಗಡಿಗೆ ತೆರಳಿ ಗುಂಡಿ ಮುಚ್ಚುವ ಉಪಕರಣಗಳನ್ನು ತಂದು ಆ ಗುಂಡಿಯನ್ನು ಮುಚ್ಚಿದರು. ಅಲ್ಲಿಂದ ಅವರು ಹಿಂದೆ ನೋಡಲೇ ಇಲ್ಲ. ಪ್ರತಿನಿತ್ಯವೂ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿದರು.
ಜನರಿಂದ ತೆರಿಗೆ ಪಡೆಯುತ್ತಿರುವ ಸರ್ಕಾರ ರಸ್ತೆ ರಿಪೇರಿ ಮಾಡುವ ಕಾರ್ಯವನ್ನು ಮಾಡಬೇಕು, ಆದರೆ ಗಂಗಾಧರ್ ಅವರು ತಮ್ಮ ಪೆನ್ಶನ್ ಹಣದಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ನಿಜಕ್ಕೂ ಅವರ ನಿಸ್ವಾರ್ಥ ಸೇವೆಯನ್ನು ಮೆಚ್ಚಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.