ವಾರಣಾಸಿ: ಕಳ್ಳತನವಾಗಿದ್ದ 105 ವರ್ಷ ಹಳೆಯ ಶ್ರೀ ರಾಮಚರಿತಮಾನಸ ಉರ್ದು ಪ್ರತಿನವದೆಹಲಿಯ ಚಿಂದಿ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ.
1910ರಲ್ಲಿ ಲಾಹೋರ್ನಲ್ಲಿ ಈ ರಾಮಚರಿತ ಮಾನಸವನ್ನು ಮುದ್ರಿಸಲಾಗಿತ್ತು, ಇದು ನವದೆಹಲಿಯ ಹೌಝ್ ಖಾಸ್ ಚಿಂದಿ ಮಾರುಕಟ್ಟೆಯಲ್ಲಿ ಇತರ ಹರಿದ ಪುಸ್ತಕಗಳ ರಾಶಿಯಲ್ಲಿ ಪತ್ತೆಯಾಗಿದೆ.
ಈ ಉರ್ದು ಪ್ರತಿಯನ್ನು ಸಂಕಟ್ ಮೋಚನ್ ದೇಗುಲದ ಅರ್ಚಕರ ಕುಟುಂಬ 600 ರೂಪಾಯಿ ನೀಡಿ ಖರೀದಿಸಿದೆ. ಇದೇ ದೇಗುಲದಲ್ಲಿ ಹಲವು ತಿಂಗಳುಗಳ ಹಿಂದೆ ರಾಮಚರಿತ ಮಾನಸದ ಉರ್ದು ಪ್ರತಿ ಮತ್ತು ಗೋಸ್ವಾಮಿ ತುಳಸೀದಾಸ್ಗೆ ಸಂಬಂಧಿಸಿದ ಪವಿತ್ರ ಪುಸ್ತಕ ಕಳ್ಳತನವಾಗಿತ್ತು.
ಅರ್ಚಕ ವೀರ್ ಭದ್ರ ಮಿಶ್ರಾ ಮತ್ತು ಬನರಾಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರ ಇಬ್ಬರು ಮಕ್ಕಳು ಈ ಪುಸ್ತಕಕ್ಕಾಗಿ ದೇಶದಾದ್ಯಂತ ಹುಡುಕಾಟ ನಡೆಸಿದ್ದರು, ಇದೀಗ ಅದು ನವದೆಹಲಿಯ ಚಿಂದಿ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ.
1904ರಲ್ಲಿ ತುಳಸೀದಾಸ್ ಅವರ ಭಕ್ತನಾಗಿದ್ದ ಶಿವ್ ಬ್ರತ್ ಲಾಲ್ ಎಂಬುವವರು ಉರ್ದುವಿನಲ್ಲಿ ರಾಮಮಾನಸ ಚರಿತವನ್ನು ಬರೆದಿದ್ದರು, 1910ರಲ್ಲಿ ಇದನ್ನು ಲಾಹೋರ್ನಲ್ಲಿ ಮುದ್ರಿಸಲಾಗಿತ್ತು, ಇದರಲ್ಲಿ ಹಲವಾರು ಕೈಯಲ್ಲಿ ಬಿಡಿಸಿ ಭಾವಚಿತ್ರಗಳಿವೆ. ಈ ಚಿತ್ರದ ನಕಲು ಪ್ರತಿಯೊಂದನ್ನು ಸಂಕಟ್ ಮೋಚನ್ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ.
ಪುಸ್ತಕದ ಮೌಲ್ಯವನ್ನು ಅರಿಯದ ಕಳ್ಳರು ಇದನ್ನು ಕದ್ದು ಚಿಂದಿ ಅಂಗಡಿಗೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.