ನವದೆಹಲಿ: ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಪತ್ರಕರ್ತ ಡಾ. ಚಂದನ್ ಮಿತ್ರಾ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಕರ್ನಾಟಕದ ಪ್ರಚಾರ ವಿಭಾಗದ ಜೊತೆಗೆ ಡಾ. ಚಂದನ್ ಮಿಶ್ರಾ ಅವರದ್ದು ನಿಕಟ ಸಂಪರ್ಕ. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಎಳೆಯ ಕಾರ್ಯಕರ್ತರಿಗೆ, ಪತ್ರಕರ್ತರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು.
ಶ್ರೀ ಗುರೂಜಿ ಜನ್ಮಶತಾಬ್ದಿ ನಿಮಿತ್ತ ವಿಶ್ವ ಸಂವಾದ ಕೇಂದ್ರದ ವತಿಯಿಂದ ಸೆಪ್ಟೆಂಬರ್ 24, 2006 ರಲ್ಲಿ ಬೆಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ‘ಹಿಂದುತ್ವ-ಮೀಡಿಯಾ ಡೈಲಾಗ್’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಡಾ. ಚಂದನ್ ಮಿತ್ರಾ ಅವರು Nationalism and Hindutva: Media Dynamics ಕುರಿತು ಮಾತನಾಡಿದ್ದರು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಸಂಸ್ಥೆಯ ಶಾಂತಕುಮಾರ್, ಎಸ್ ಗುರುಮೂರ್ತಿ, ತರುಣ್ ವಿಜಯ್, ಡಾ. ಎ. ಸೂರ್ಯಪ್ರಕಾಶ್ ದೀಪಕ್ ತಿಮ್ಮಯ್ಯ, ವರದೇಶ್ ಹೀರೇಗಂಗೆ, ರಾಮ್ ಮಾಧವ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಎಪ್ರಿಲ್ 4, 2012 ರಂದು ಪ್ರಚಾರ ವಿಭಾಗ ಆಯೋಜಿಸಿದ್ದ ರಾಜ್ಯ ಮಟ್ಟದ ಮಾಧ್ಯಮ ವಿಚಾರ ಸಂಕಿರಣ ‘A Symposium on Current Issues : A Dialogue with Media’ ದಲ್ಲಿ ಪಾಲ್ಗೊಂಡು ಡಾ. ಚಂದನ್ ಮಿತ್ರಾ ಅವರು ಉದ್ಘಾಟನಾ ಭಾಷಣ ಮಾಡಿದ್ದರು. ಪತ್ರಕರ್ತ-ಅಂಕಣಕಾರ ನಾಗೇಶ್ ಹೆಗಡೆ, ಪ್ರಾಧ್ಯಾಪಕ ಪ್ರೊ. ಆರ್.ಎಲ್.ಎಂ. ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪ್ರಚಾರ ವಿಭಾಗದ ಕಾರ್ಯಕರ್ತರು ಭಾಗವಹಿಸಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಹಾಗೂ ಮಿಥಿಕ್ ಸೊಸೈಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು.
ಚಂದನ್ ಮಿತ್ರಾ ಅವರ ಅನೇಕ ಲೇಖನಗಳು ನಮ್ಮ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರಿಗೆ, ಚಾನೆಲ್ ಪ್ಯಾನೆಲಿಸ್ಟ್ ಗಳಿಗೆ ಅವರು ಅನೇಕ ಸಲಹೆ, ಮಾರ್ಗದರ್ಶಕ ಅಂಶಗಳನ್ನು ನೀಡುತ್ತಿದ್ದರು. ಅವರಿನ್ನು ನೆನಪು ಮಾತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.