ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ಮುರಿದು ಬೀಳಲು ಭಾರತವೇ ಕಾರಣ ಎಂದು ಆಪಾದಿಸಿರುವ ಪಾಕಿಸ್ಥಾನ, ತನ್ನ ಬಳಿ ಅಣ್ವಸ್ತ್ರ ಇದೆ ಎಂಬ ಎಚ್ಚರಿಕೆಯನ್ನು ಮತ್ತೊಮ್ಮೆ ರವಾನಿಸಿದೆ.
ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರು, ‘ಮೋದಿಯ ಭಾರತ ಪ್ರಾದೇಶಿಕ ಸೂಪರ್ ಪವರ್ನಂತೆ ವರ್ತಿಸುತ್ತಿದೆ. ನಮ್ಮದು ಅಣ್ವಸ್ತ್ರ ದೇಶ, ನಮ್ಮನ್ನು ನಮಗೆ ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ತಿಳಿದಿದೆ’ ಎಂದಿದ್ದಾರೆ.
‘ತನ್ನ ತಂತ್ರಗಾರಿಕೆ ನಡೆಯುವುದಿಲ್ಲ ಎಂಬುದನ್ನು ಇತ್ತೀಚಿನ ಬೆಳವಣಿಗೆಯಿಂದ ಭಾರತ ಅರಿತುಕೊಳ್ಳಬೇಕು. ಅಲ್ಲದೇ ಅವರು ಮಾತಕತೆಯ ಬಗ್ಗೆ ಪ್ರಾಮಾಣಿಕತೆ ಪ್ರದರ್ಶಿಸಬೇಕು’ ಎಂದಿದ್ದಾರೆ.
ಪಾಕಿಸ್ಥಾನದ ವಿರುದ್ಧ ಅಪಪ್ರಚಾರ ಮಾಡುವುದು ಭಾರತೀಯರಿಗೆ ಗೊತ್ತಿದೆ, ಆದರೆ ಅದಕ್ಕೆ ಸಾಕ್ಷಿ ನೀಡಬೇಕೆಂದು ಅವರಿಗೆ ಗೊತ್ತಿಲ್ಲ. ಪಾಕ್ನಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾರತ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಬಾರದು ಎಂಬ ಭಾರತದ ಸಲಹೆಯನ್ನು ಪಾಕ್ ಧಿಕ್ಕರಿಸಿದ ಹಿನ್ನಲೆಯಲ್ಲಿ ನಿಗಧಿಯಾಗಿದ್ದ ಭಾರತ-ಪಾಕ್ ಮಾತುಕತೆ ಶನಿವಾರ ಮುರಿದು ಬಿತ್ತು. ಆದರೆ ಪಾಖ್ ಇದೀಗ ಎಲ್ಲಾ ಆಪಾದನೆಗಳನ್ನು ಭಾರತದ ಮೇಲೆ ಹಾಕುತ್ತಿದೆ. ಅಷ್ಟೇ ಅಲ್ಲದೇ ನಮ್ಮದು ಅಣ್ವಸ್ತ್ರ ರಾಷ್ಟ್ರ ಎಂಬ ಪೊಳ್ಳು ಬೆದರಿಕೆ ಹಾಕುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.