ಮಂಗಳೂರು : ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಶಿಸ್ತು, ಸಂಸ್ಕೃತಿ, ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಶಿಕ್ಷಕರಿಗೆ ಪೋಷಕರಿಗೆ, ಸಮಾಜಕ್ಕೆಉತ್ತಮಕೊಡುಗೆ ನೀಡಿದಂತಾಗುತ್ತದೆ.ಪೋಷಕರಅಪಾರ ಕಲ್ಪನೆಗಳನ್ನು ನನಸಾಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ನಡೆಸಿ ಶಾಲೆಗೆ ಪೋಷಕರಿಗೆ ಕೀರ್ತಿತರಬೇಕು’ಎಂದು ಶಿಕ್ಷಕರ ಕ್ಷೇತ್ರದ ಪ್ರತಿನಿಧಿ, ವಿಧಾನ ಪರಿಷತ್ ಉಪ ಸಭಾಪತಿಯಾದ ಮರಿತಿಪ್ಪೇಗೌಡ ಹೇಳಿದರು.
ಅವರು ವಿಕಾಸ್ ಪದವಿ ಪೂರ್ವಕಾಲೇಜಿನಲ್ಲಿ ಖಾಸಗಿ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ವಿಕಾಸ್ ಸಂಸ್ಥೆಯಅಧ್ಯಕ್ಷರಾದ ಶ್ರೀ.ಕೃಷ್ಣ.ಜೆ. ಪಾಲೆಮಾರ್ಅವರು ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡರು.
ಪ್ರಾಂಶುಪಾಲರಾದಡಾ.ಕೆ.ರಾಜೇಂದ್ರ, ಸಲಹೆಗಾರರಾದ ಶ್ರೀ.ಅನಂತ ಪ್ರಭು,ಆಡಳಿತ ಮಂಡಳಿ ಸದಸ್ಯರಾದ ಶ್ರೀ. ಸೂರಜ್ಕುಮಾರ್ಕಲ್ಯ ,ಆಡಳಿತಾಧಿಕಾರಿ ಶ್ರೀಯುತ ಕಾಲಿನ್ ಡಿಸೋಜಾ ಮುಂತಾದವರು ಉಪಸ್ಥಿತ ರಿದ್ದರು.
ಕಾಲೇಜಿನ ಆಡಳಿತ ಸಲಹೆಗಾರರಾದ ಶ್ರೀ.ಅನಂತ್ ಪ್ರಭು ಅತಿಥಿಗಳನ್ನು ಸ್ವಾಗತಿಸಿದರು.ಉಪ ಪ್ರಾಂಶುಪಾಲರಾದ ಶ್ರೀ.ನವೀನ್ಎಸ್. ಎ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.