ನವದೆಹಲಿ: ಕ್ರೂರ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವುದು ಅಮಾನವೀಯ, ಅಥವಾ ಅನಾಗರಿಕವಲ್ಲ. ಬದುಕುವ ಹಕ್ಕು ಅಥವಾ ಸ್ವಾತಂತ್ರ್ಯವನ್ನು ಇದು ಹತ್ತಿಕ್ಕುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
16ವರ್ಷದ ಬಾಲಕಿಯನ್ನು ಕೊಂಡು ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ವಿಕ್ರಂ ಸಿಂಗ್ ಎಂಬತಾ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲನೆ ನಡೆಸಿದ ಸಂದರ್ಭ ನ್ಯಾ. ಟಿಎಸ್ ಠಾಕೂರ್, ನ್ಯಾ.ಆರ್ಕೆ ಅಗರ್ವಾಲ್, ನ್ಯಾ.ಎಕೆ ಗೋಯಲ್ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮರಣದಂಡನೆಯನ್ನು ಭಯೋತ್ಪಾದಕರಿಗೆ ಮಾತ್ರ ನೀಡಬೇಕು ಎಂದು ವಿಕ್ರಂ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದ.
ಆದರೆ ನ್ಯಾಯಪೀಠ ಇದನ್ನು ತಿರಸ್ಕರಿಸಿದ್ದು, ಅಪರಾಧ ಕೊಲೆಯಂತಹ ಕ್ರೂರ ಪ್ರಕರಣಗಳಲ್ಲಿ ಪ್ರಕರಣದ ಕ್ರೂರತೆಗೆ ಅನುಗುಣವಾಗಿ ಮರಣದಮಡನೆ ವಿಧಿಸಲಾಗುತ್ತದೆ. ಇದು ಬದುಕುವ ಹಕ್ಕಿನ ಉಲ್ಲಂಘಣೆಯಲ್ಲ ಎಂದಿದೆ.
ಅಲ್ಲದೇ ಅಪರಾಧಿಯ ಕೃತ್ಯವು ನಮ್ಮ ಒಕ್ಕೂಟ ವ್ಯವಸ್ಥೆ, ಜಾತ್ಯತೀತ ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ ಹಾಕಿದ ಬೆದರಿಕೆ ಎನ್ನುವುದು ಸಾಬೀತಾದ ಕಾರಣ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ತೀರ ಅಪರೂಪದ ಪ್ರಕರಣಗಳಲ್ಲಿ ಇಂತಹ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಇದನ್ನು ಅಮಾನವೀಯ ಎಂದು ಪರಿಗಣಿಸಲಾಗದು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.