ಜಾಗತಿಕ ಮಾನದಂಡ ಮತ್ತು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಹೊಸ ಬದಲಾವಣೆಯೊಂದಿಗೆ ಋತಮ್ ಅಪ್ಲಿಕೇಶನ್ನ ಹೊಸ ಆವೃತ್ತಿಯನ್ನು ಹೊರ ತರಲಾಗಿದೆ. 2021 ರ ಆಗಸ್ಟ್ 20 ರಿಂದ ಇದು ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಲಭ್ಯವಿರಲಿದೆ.
ಅನುಭವಿ ಮತ್ತು ನುರಿತ ವ್ಯಕ್ತಿಗಳ ಮಾರ್ಗದರ್ಶನದೊಂದಿಗೆ ಆ್ಯಪ್ನಲ್ಲಿ ಮಹತ್ತರವಾದ ಬದಲಾವಣೆ ಮಾಡಲಾಗಿದೆ. ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಋತಮ್ನ ಹೊಸ ಆವೃತ್ತಿಯನ್ನು ವಿನ್ಯಾಸ ಮಾಡಲಾಗಿದೆ. ಅಲ್ಲದೇ ಸರಳೀಕರಿಸಲಾಗಿದೆ.
ಋತಮ್ನ ಹೊಸ ಆವೃತ್ತಿ ಕೇವಲ ಸುದ್ದಿಗಳಿಗಷ್ಟೇ ಸೀಮಿತವಾಗಿರದೆ, ಆಸಕ್ತಿದಾಯಕ ವಿಷಯಗಳು, ಸೃಜನಶೀಲ ಬರಹಗಳು ಸಹಿತ ಜ್ಞಾನಾಧಾರಿತ ವಿಚಾರಗಳು ಮತ್ತು ಔಚಿತ್ಯಪೂರ್ಣ ಮಾಹಿತಿ ಭಂಡಾರವಾಗಿರಲಿದೆ. ಎಲ್ಲ ವರ್ಗದ, ಲಿಂಗದ, ವಯೋಮಾನದವರಿಗೂ ಆಪ್ತವಾಗುವ ಹತ್ತು ಹಲವು ಮಾಹಿತಿಗಳು ಋತಮ್ ಆ್ಯಪ್ನಲ್ಲಿ ಲಭ್ಯವಾಗಲಿದೆ. ಎಲ್ಲಾ ದೃಷ್ಟಿಕೋನ ಮತ್ತು ವಿಚಾರವನ್ನು ಗಮನದಲ್ಲಿಕೊಂಡು ಇದನ್ನು ಅಭಿವೃದ್ಧಿ ಪಡಿಸಲಾಗಿದೆ.
ಪ್ರಸ್ತುತ 11 ಭಾರತೀಯ ಭಾಷೆಗಳಲ್ಲಿ ಆ್ಯಪ್ ಲಭ್ಯವಿದೆ. 400 ಭಾರತೀಯ ಪೋರ್ಟಲ್, 380 ಯೂಟ್ಯೂಬ್ ಚಾನೆಲ್ಗಳು ಸಹಿತ 1200 ಮಂದಿ ಬರಹಗಾರರಿರುವ ಬಹು ದೊಡ್ಡ ವೇದಿಕೆ ಇದಾಗಿದೆ. ಋತಮ್ ಆ್ಯಪ್ ಅನ್ನು ತಮ್ಮ ಆಸಕ್ತಿ, ಉತ್ಸಾಹ, ಅಗತ್ಯಕ್ಕೆ ತಕ್ಕಂತೆ ಜನರು ಬಳಸಬಹುದಾಗಿದೆ.
ಜಾಗತಿಕ ಮಟ್ಟದಲ್ಲಿ ಭಾರತ ದೇಶದ ಅಭ್ಯುದಯ ಮತ್ತು ಏಳಿಕೆಯ ಬಗೆಗಿನ ತತ್ವ ನಿಷ್ಠ ಮಾಹಿತಿಗಳು, ದೇಶವು ಬಡ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಳಚಿ ಸಮೃದ್ಧ ಮತ್ತು ಸಮರ್ಥ ರಾಷ್ಟ್ರವಾಗಿ ಉತ್ತುಂಗದತ್ತ ಸಾಗುತ್ತಿರುವ ಬಗ್ಗೆಯೂ ಕುತೂಹಲಕಾರಿ ಲೇಖನಗಳು ಇದರಲ್ಲಿರಲಿವೆ. ತತ್ವನಿಷ್ಠ, ಸತ್ಯನಿಷ್ಠತೆಗೆ ಹೆಸರಾಗಿರುವ ಋತಮ್ ಧನಾತ್ಮಕ ದೃಷ್ಠಿಕೋನ, ಕ್ರಮಬದ್ಧ ಓದಿಗೆ ಮಹತ್ವ ನೀಡಿ, ರಾಷ್ಟ್ರ, ಆಧ್ಯಾತ್ಮ, ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಹಿತ್ಯ, ವಾಣಿಜ್ಯ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚಿನ ಒತ್ತು ನೀಡಲಿರುವ ಆ್ಯಪ್ ಆಗಿರಲಿದೆ.
ನ್ಯೂಸ್ ಭಾರತಿ ಋತಮ್ ಆ್ಯಪ್ನ ಹೆಮ್ಮೆಯ ಪಾಲುದಾರ. ರಿಮೇಕ್ ಆ್ಯಪ್ನ ಹೊಸ ಆವೃತ್ತಿಯನ್ನು ಡೌನ್ಲೋಡ್ ಮಾಡಿ ಮತ್ತು ಇತ್ತೀಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.