ಬೆಂಗಳೂರು: ಇಂದು ವಿಶ್ವ ಆನೆ ದಿನ. ಮೊದಲ ವಿಶ್ವ ಆನೆ ದಿನವನ್ನು 2012ರ ಆಗಸ್ಟ್ 12 ರಂದು ಆಚರಿಸಲಾಯಿತು. ಅಂದಿನಿಂದ ಆನೆಗಳ ಬಗ್ಗೆ ಕಾಳಜಿ ವಹಿಸಲು ಮತ್ತು ಸಂರಕ್ಷಿಸಲು ವಿಶೇಷವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ಈ ಸಂಬಂಧ ನಡೆದ ಸಮಾರಂಭದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಸಿಂಗ್ ಯಾದವ್, ಕಳೆದ 25 ವರ್ಷಗಳಿಂದೀಚೆಗೆ ಆನೆಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಆನೆಗಳು ವಾಸಿಸುವ ಸ್ಥಳಪತ್ತೆ ಮತ್ತು ಆ ಪ್ರದೇಶಗಳಲ್ಲಿ ಆನೆಗಳ ವಾಸಯೋಗ್ಯ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ. ಆನೆ ಮತ್ತು ಮಾನವನ ನಡುವಿನ ಸಂಘರ್ಷ ತಂತ್ರಜ್ಞಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ನಿಯಂತ್ರಿಸುವುದು ಸಾಧ್ಯವಿಲ್ಲ. ಕಾನೂನಿನ ಜೊತೆಗೆ ಮಾನವರಲ್ಲಿ ಜಾಗೃತಿ ಮೂಡುವುದು ಅವಶ್ಯವಾಗಿದೆ. ಪ್ರಾಣಿಗಳ ಬಗ್ಗೆ ದಯಾಪರ ಕಾಳಜಿ ಅಗತ್ಯ ಎಂದು ಅಭಿಪ್ರಾಯಪಟ್ಟರು.
ವಿಶ್ವ ಆನೆ ದಿನದ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಡೀ ದೇಶದಲ್ಲಿ ಮಾದರಿ ಎನಿಸುವಂತೆ ಗಜ ಸಂರಕ್ಷಣೆಯನ್ನು ಕರ್ನಾಟಕ ನಡೆಸುತ್ತಿದೆ. ಈ ವಿಶ್ವ ಆನೆ ದಿನಾಚರಣೆಯಂದು, ಆನೆಗಳ ವಾಸಯೋಗ್ಯ ಪರಿಸರ, ಗಜಹತ್ಯೆ ತಡೆ ಸೇರಿದಂತೆ ಆನೆಗಳ ಸಂರಕ್ಷಣೆ ನಿಟ್ಟಿನಲ್ಲಿ, ಇನ್ನೂ ಹೆಚ್ಚಿನ ಬದ್ಧತೆಯಿಂದ ಕಾರ್ಯನಿರ್ವಹಿಸುವ ದೃಢ ಸಂಕಲ್ಪ ಮಾಡೋಣ ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲಿ ಮಾದರಿ ಎನಿಸುವಂತೆ ಗಜ ಸಂರಕ್ಷಣೆಯನ್ನು ಕರ್ನಾಟಕ ನಡೆಸುತ್ತಿದೆ. ಈ ವಿಶ್ವ ಆನೆ ದಿನಾಚರಣೆಯಂದು, ಆನೆಗಳ ವಾಸಯೋಗ್ಯ ಪರಿಸರ, ಗಜಹತ್ಯೆ ತಡೆ ಸೇರಿದಂತೆ ಆನೆಗಳ ಸಂರಕ್ಷಣೆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಬದ್ಧತೆಯಿಂದ ಕಾರ್ಯನಿರ್ವಹಿಸುವ ದೃಢ ಸಂಕಲ್ಪ ಮಾಡೋಣ.#WorldElephantDay2021 pic.twitter.com/4bf5gOR024
— CM of Karnataka (@CMofKarnataka) August 12, 2021
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಗಣ್ಯರು ವಿಶ್ವ ಆನೆ ದಿನದಂದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ, ದೇಶದಲ್ಲೇ ಅತಿ ಹೆಚ್ಚು ಆನೆಗಳಿವೆ. 2017ರಲ್ಲಿ ನಡೆದ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6 ಸಾವಿರದ 49 ಆನೆಗಳಿದ್ದು, ಈ ಮೂಲಕ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಸ್ಸಾಂ, 5 ಸಾವಿರದ 719 ಆನೆಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದರೆ, ಕೇರಳ 3 ಸಾವಿರದ 54 ಆನೆಗಳನ್ನು ಹೊಂದುವ ಮೂಲಕ 3 ನೇ ಸ್ಥಾನದಲ್ಲಿದೆ.
ಬಂಡಿಪುರ, ನಾಗರಹೊಳೆ, ಭದ್ರಾ, ಬನ್ನೇರುಘಟ್ಟ, ಬಿ ಆರ್ ಟಿ , ಕೊಳ್ಳೇಗಾಲ ಮಡಿಕೇರಿ, ಹಾಸನ, ದಾಂಡೇಲಿ, ಬೆಂಗಳೂರು ಗ್ರಾಮಾಂತರ ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ಆನೆ ಗಣತಿ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.