ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ 17 ರಾಜ್ಯಗಳಿಗೆ ಸಂಬಂಧಿಸಿದಂತೆ 9,871 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದೆ.
ಆಂಧ್ರಪ್ರದೇಶ (1438.08 ಕೋಟಿ), ಅಸ್ಸಾಂ (531.33 ಕೋಟಿ), ಹರಿಯಾಣ(11 ಕೋಟಿ), ಹಿಮಾಚಲ ಪ್ರದೇಶ(854.08 ಕೋಟಿ), ಕರ್ನಾಟಕ(135.92 ಕೋಟಿ), ಕೇರಳ(1657.58 ಕೋಟಿ), ಮಣಿಪುರ(210.33 ಕೋಟಿ), ಮೇಘಾಲಯ(106.58 ಕೋಟಿ), ಮಿಜೋರಾಂ(149.17 ಕೋಟಿ), ನಾಗಲ್ಯಾಂಡ್(379.75 ಕೋಟಿ), ಪಂಜಾಬ್(840.08 ಕೋಟಿ), ರಾಜಸ್ಥಾನ(823.17 ಕೋಟಿ), ಸಿಕ್ಕಿಂ(56.50 ಕೋಟಿ), ತಮಿಳುನಾಡು(183.67 ಕೋಟಿ), ತ್ರಿಪುರಾ(378.83 ಕೋಟಿ), ಉತ್ತರಾಖಂಡ್(647.67 ಕೋಟಿ), ಪಶ್ಚಿಮ ಬಂಗಾಳ(1467.25 ಕೋಟಿ ರೂ.) ರಾಜ್ಯಗಳಿಗೆ ಈ ಅನುದಾನ ಬಿಡುಗಡೆ ಮಾಡಿದೆ.
ಹದಿನೈದನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ.ಗಳ ತೆರಿಗೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ. ಇದರಲ್ಲಿ ಈವರೆಗೆ 49,355 ಕೋಟಿ ರೂ(41.67%) ಹಣ ಬಿಡುಗಡೆಯಾಗಿದೆ.ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ನೇ ಆರ್ಥಿಕ ವರ್ಷಕ್ಕೆ ತೆರಿಗೆ ಹಂಚಿಕೆ ಮೌಲ್ಯಮಾಪನವನ್ನು ಆಯೋಗವು ಗಣನೆಗೆ ತೆಗೆದುಕೊಂಡು ಈ ಮೊತ್ತ ಬಿಡುಗಡೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.