ಮಂಗಳೂರು : ನಗರದ ಮೇರಿಹಿಲ್ನಲ್ಲಿರುವ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ, ಮಂಗಳೂರಿನ ಹೆಸರಾಂತ ರೇಡಿಯೋ ವಾಹಿನಿಯಾದ 93.5ರೆಡ್ ಎಫ್.ಎಂ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ್ ಶಾಲಾ ‘ಬ್ಯಾಟಲ್ ಆಫ್ ಬ್ರೈನ್’ ಎನ್ನುವ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ನಗರದ ಸುಮಾರು 35 ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ, ಕನ್ನಡ ಮತ್ತು ತುಳು ಭಾಷೆಯ ನಟ ಶ್ರೀ. ರಾಘವೇಂದ ರೈ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುತ್ತಾ ‘ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕಲೆಯನ್ನು ಉಳಿಸುವ ಪ್ರಯತ್ನ ಕೂಡ ಆಗಬೇಕು’ ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಕೃಷ್ಣ.ಜೆ.ಪಾಲೆಮಾರ್ ವಹಿಸಿ ‘ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತಹ ಕಾರ್ಯಕ್ರಮ ಮಾಧ್ಯಮಗಳಿಂದ ಆಗಾಗ ಆಗುತ್ತಿರಬೇಕು’ಎಂದರು. ರೆಡ್ಎಫ್.ಎಂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ವಾಹಿನಿಯನ್ನು ಅಭಿನಂದಿಸಿದರು.
ಪ್ರಾಂಶುಪಾಲರಾದ ಡಾ.ಕೆ.ರಾಜೇಂದ್ರ, ಸಲಹೆಗಾರರಾದ ಶ್ರೀ.ಅನಂತ ಪ್ರಭು, ಟ್ರಸ್ಟಿಗಳಾದ ಶ್ರೀ.ಜೆ. ಕೊರಗಪ್ಪ, ಶ್ರೀ. ಸೂರಜ್ ಕುಮಾರ್ ಕಲ್ಯ ಆಡಳಿತಗಾರರಾದ ಶ್ರೀಯುತ ಕಾಲಿನ್ ಡಿಸೋಜಾ, ರೆಡ್ ಎಫ್.ಎಂ ವಾಹಿನಿಯ ಮುಖ್ಯಸ್ಥರಾದ ಶೋಭಿತ್ ಶೆಟ್ಟಿ, ಕ್ಚಿಜ್ ಮಾಸ್ಟರ್ ಶ್ರೀ. ರಕ್ಷಿತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಸಿದ್ದಾರ್ಥ್ ಬಂಗೇರಾ, ಅಮೋಘ್ ದೇಸಾಯಿ, ಪ್ರಜ್ಞಾ ಹೆಬ್ಬಾರ್ ತಂಡ ಪಡೆದುಕೊಂಡಿತು.
ದ್ವಿತೀಯ ಬಹುಮಾನವನ್ನು ಲೂರ್ಡ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಮನೀಷ್ ಎನ್. ಭಟ್, ಅಮ್ರಾ ಫಾತಿಮಾ, ಪಾರ್ಥನ್ ಎಸ್.ಎಲ್ ತಂಡ ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಕೆನರಾ ಹುಡುಗರ ಶಾಲೆ ವಿದ್ಯಾರ್ಥಿಗಳಾದ ಮನೀಷ್. ಆರ್ ಬೇಕಲ್, ಶಶಾಂಕ್ ಎಸ್. ಭಟ್, ಅನಂತ ನಾರಾಯಣ. ಎಂ, ತಂಡ ಪಡೆದುಕೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.