ನವದೆಹಲಿ: ಹರ್ಯಾಣದ ಪಾಲ್ವಾರ್ ಜಿಲ್ಲೆಯ ವಿಕ್ರಮಗಢ ತಾಲೂಕಿನ ಬುಡಕಟ್ಟು ಜನಾಂಗದ ಮಹಿಳೆಯರು ಪರಿಸರ ಸ್ನೇಹಿ ಬಿದಿರಿನ ರಾಖಿಗಳನ್ನು ಸಿದ್ಧಪಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.
ಸ್ಥಳೀಯವಾಗಿ ಬೆಳೆಯಲಾದ ಬಿದಿರು ಬಳಸಿ ಈ ರಕ್ಷೆಗಳನ್ನು ತಯಾರಿಸುತ್ತಿದ್ದಾರೆ. ಸ್ಥಳೀಯ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇವರು ಅವರಿಂದಲೇ ಬಿದಿರುಗಳನ್ನು ಖರೀದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ತಾವು ಬಿದಿರಿನಿಂದ ತಯಾರು ಮಾಡಿದ ರಕ್ಷೆಗಳಿಗೆ ಯಾವುದೇ ರೀತಿಯ ಬಣ್ಣ ಅಥವಾ ಬೇರ್ಯಾವುದೇ ರಾಸಾಯನಿಕಗಳ ಬಳಕೆಯನ್ನು ಮಾಡುತ್ತಿಲ್ಲ. ಈ ರಕ್ಷೆಗಳು ರಾಸಾಯನಿಕ ಮುಕ್ತ ಮತ್ತು ಪ್ರಕೃತಿ ಸ್ನೇಹಿಯಾಗಿವೆ.
ಬುಡಕಟ್ಟು ಜನಾಂಗದ ಇಬ್ಬರು ಸಹೋದರಿಯರು ಈ ರಕ್ಷೆಗಳನ್ನು ತಯಾರಿಸುತ್ತಿದ್ದಾರೆ. ಕರಕುಶಲ ವಿನ್ಯಾಸಗಳಿಂದ ಅಂದವಾಗಿ ಇವುಗಳ ವಿನ್ಯಾಸ ಇದ್ದು, ಆರೋಗ್ಯಪೂರ್ಣವಾಗಿವೆ. ಉಡುಗೊರೆಯಾಗಿ ನೀಡುವುದಕ್ಕೂ ಈ ರಕ್ಷಾ ಬಂಧನಗಳು ಹೆಚ್ಚು ಸೂಕ್ತ. ಈ ರಕ್ಷೆಗಳನ್ನು ಖರೀದಿಸುವ ಮೂಲಕ ಬುಡಕಟ್ಟು ಮಹಿಳೆಯರಿಗೆ ಉತ್ತೇಜನ ನೀಡುವಲ್ಲಿ ನಾವೂ ಪಾಲು ಪಡೆಯೋಣ.
ಎರಡು ರಕ್ಷಾ ಬಂಧನಗಳಿಗೆ 100 ರೂ. ಗಳನ್ನು ನಿಗದಿ ಮಾಡಲಾಗಿದ್ದು, ದೇಶದ ಯಾವುದೇ ಭಾಗಕ್ಕೆ ಈ ಬಿದಿರಿನ ರಕ್ಷಾ ಬಂಧನಗಳನ್ನು ಕೊರಿಯರ್ ಮಾಡುವ ವ್ಯವಸ್ಥೆ ಸಹ ಇವರು ಹೊಂದಿದ್ದಾರೆ. ಆನ್ಲೈನ್ ಮೂಲಕ ಈ ರಕ್ಷಾ ಬಂಧನಗಳನ್ನು ಖರೀದಿಸಲು ಅವಕಾಶ ನೀಡಲಾಗಿದ್ದು, ಆನ್ಲೈನ್ ಹಣ ಪಾವತಿಗೂ ಅವಕಾಶವಿದೆ. keshavakutir.com ಮೂಲಕ ಈ ರಕ್ಷಾ ಬಂಧನಗಳನ್ನು ಆಸಕ್ತರು ಖರೀದಿ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.