ಬೆಂಗಳೂರು: ರಾಜ್ಯ ಸರ್ಕಾರದ ನೂತನ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾತೆಗಳ ಹಂಚಿಕೆ ಮಾಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಹಿಂದಷ್ಟೇ ನೃತನ ಸಚಿವರ ಪಟ್ಟಿ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಸಚಿವರಾದವರಿಗೆ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ನಡೆದಿತ್ತು.
ಇದೀಗ ನೂತನ ಸಚಿವರಾಗಿ ಆಯ್ಕೆಯಾದವರಿಗೆ ಸರ್ಕಾರ ಖಾತೆ ಹಂಚಿಕೆ ಮಾಡಿದೆ. ಪ್ರಮುಖ ಖಾತೆಗಳಾದ ಹಣಕಾಸು, ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ಮುಖ್ಯಮಂತ್ರಿಗಳು ತಮ್ಮ ಕೈಯಲ್ಲೇ ಉಳಿಸಿಕೊಂಡಿದ್ದಾರೆ.
ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್
ಆರ್. ಅಶೋಕ್: ಕಂದಾಯ
ವಿ. ಸೋಮಣ್ಣ: ವಸತಿ
ಅರಗ ಜ್ಞಾನೇಂದ್ರ – ಗೃಹ
ಡಾ. ಸಿ.ಎನ್. ಅಶ್ವತ್ಥ ನಾರಾಯಣ: ಉನ್ನತ ಶಿಕ್ಷಣ, ಐಟಿ
ಉಮೇಶ್ ಕತ್ತಿ: ಅರಣ್ಯ, ಆಹಾರ
ಎಸ್.ಟಿ. ಸೋಮಶೇಖರ್: ಸಹಕಾರ
ಡಾ. ಕೆ. ಸುಧಾಕರ್ : ಆರೋಗ್ಯ, ವೈದ್ಯಕೀಯ ಶಿಕ್ಷಣ
ಬಿ. ಶ್ರೀ ರಾಮುಲು: ಸಾರಿಗೆ, ಪರಿಶಿಷ್ಟ ಕಲ್ಯಾಣ
ಗೋವಿಂದ ಕಾರಜೋಳ: ಭಾರೀ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ
ಕೋಟ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ
ಸುನೀಲ್ ಕುಮಾರ್ : ಇಂಧನ, ಕನ್ನಡ ಮತ್ತು ಸಂಸ್ಕೃತಿ
ಎಸ್. ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಸಿ.ಸಿ. ಪಾಟೀಲ್ : ಲೋಕೋಪಯೋಗಿ ಖಾತೆ
ಬೈರತಿ ಬಸವರಾಜ : ನಗರಾಭಿವೃದ್ದಿ
ಮುರುಗೇಶ್ ನಿರಾಣಿ : ಬೃಹತ್ ಮತ್ತು ಸಣ್ಣ ಕೈಗಾರಿಕೆ
ಶಿವರಾಂ ಹೆಬ್ಬಾರ್: ಕಾರ್ಮಿಕ ಖಾತೆ
ಶಶಿಕಲಾ ಜೊಲ್ಲೆ: ಮುಜರಾಯಿ
ಕೆ.ಸಿ. ನಾರಾಯಣಗೌಡ: ಯುವಜನ ಸಬಲೀಕರಣ ಮತ್ತು ಕ್ರೀಡೆ
ಮುನಿರತ್ನ: ತೋಟಗಾರಿಕೆ
ಎಂ.ಟಿ.ಬಿ. ನಾಗರಾಜ್ : ಪೌರಾಡಳಿತ
ಗೋಪಾಲಯ್ಯ: ಅಬಕಾರಿ
ಮಾಧುಸ್ವಾಮಿ: ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ
ಹಾಲಪ್ಪ ಆಚಾರ್ : ಗಣಿ, ಭೂ ವಿಜ್ಞಾನ
ಶಂಕರ್ ಪಾಟೀಲ್ ಮುನೇನಕೊಪ್ಪ : ಸಕ್ಕರೆ, ರೇಶ್ಮೆ, ಜವುಳಿ
ಪ್ರಭು ಚೌವ್ಹಾಣ್ : ಪಶು ಸಂಗೋಪನೆ
ಆನಂದ್ ಸಿಂಗ್ : ಪರಿಸರ ಮತ್ತು ಪ್ರವಾಸೋದ್ಯಮ
ಬಿ.ಸಿ. ನಾಗೇಶ್ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಬಿ.ಸಿ. ಪಾಟೀಲ್: ಕೃಷಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.