ನವದೆಹಲಿ: ಶಾಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾನವ ಸಂಪನ್ಮೂಲ ಸಚಿವ ಸ್ಮೃತಿ ಇರಾನಿಯವರ ಹೆಸರಲ್ಲಿ ಸಿಬಿಎಸ್ಇ ಕಳುಹಿಸಿದ್ದ ಪತ್ರಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಪರಿಣಾಮ ಶಿಕ್ಷಕರು ಮತ್ತು ಸಾಮಾಜಿಕ ಜಾಲತಾಣಗಳಿಂದ ಸಚಿವೆ ಸಾಕಷ್ಟು ನಿಂದನೆಗಳನ್ನು ಕೇಳಬೇಕಾಯಿತು. ಇದೀಗ ತನ್ನಿಂದಾದ ಪ್ರಮಾದಕ್ಕೆ ಸಿಬಿಎಸ್ಇ ಸ್ಮೃತಿಯವರ ಕ್ಷಮೆಯಾಚನೆ ಮಾಡಿದೆ.
ಸಿಬಿಎಸ್ಇ ಕಾರ್ಯದರ್ಶಿ ಜೋಸೆಫ್ ಇಮ್ಯಾನ್ಯವೆಲ್ ಅವರು ಸ್ಮೃತಿ ಅವರಿಗೆ ಪತ್ರ ಬರೆದು
‘ಕೆಲವೊಂದು ತಪ್ಪುಗಳಿಂದಾಗಿ ಈ ಪ್ರಮಾದವಾಗಿದ್ದು, ಅದಕ್ಕಾಗಿ ನಿಮ್ಮ ಕ್ಷಮೆಯಾಚನೆ ಮಾಡುತ್ತೇವೆ’ ಎಂದಿದ್ದಾರೆ.
ಪತ್ರದಲ್ಲಿ ಮಿನಿಸ್ಟರ್ ಮತ್ತು ಸಂಸಧನ್ ಎಂಬ ಶಬ್ದವನ್ನು ತಪ್ಪಾಗಿ ಬರೆಯಲಾಗಿತ್ತು, ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ಶಾಲೆಯ ಶಿಕ್ಷಕರಿಗೆ ಅಭಿನಂದನೆಯನ್ನು ಸೂಚಿಸಿ ಸ್ಮೃತಿಯವರ ಹೆಸರಿನಲ್ಲಿ ಈ ಪತ್ರವನ್ನು ದೇಶದಾದ್ಯಂತ ಕಳುಹಿಸಲಾಗಿತ್ತು.
ಆದರೆ ಇದಕ್ಕೆ ಪ್ರತಿಯಾಗಿ ಹಲವಾರು ಶಿಕ್ಷಕರು ಸ್ಮೃತಿಗೆ ಪತ್ರ ಬರೆದು ಸ್ಪೆಲ್ಲಿಂಗ್ ಮಿಸ್ಟೇಕ್ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಈ ತಪ್ಪು ಭಾರೀ ಸುದ್ದಿ ಮಾಡಿತ್ತು. ಬಳಿಕ ಸ್ಮೃತಿ ಇದು ನನ್ನಿಂದಾದ ತಪ್ಪಲ್ಲ ಎಂಬ ಸಮರ್ಥನೆಯನ್ನೂ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.