ನವದೆಹಲಿ: ದೇಶದ ಸುಮಾರು 1.09 ಕೋಟಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇಸಿಎಲ್ಜಿಎಸ್ ಮುಖೇನ 1.65 ಲಕ್ಷ ಕೋಟಿ ರೂ. ಸಾಲದ ನೆರವು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೊರೋನಾ ಲಾಕ್ಡೌನ್ ಬಳಿಕ ಎಂಎಸ್ಎಂಇ, ಸಣ್ಣವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತದ ಪ್ಯಾಕೇಜ್ 2020 ರ ಭಾಗವಾಗಿ ಈ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಂಎಸ್ಎಂಇಗಳು, ಸಣ್ಣ ವ್ಯಾಪಾರಸ್ಥರು ಅವರ ವಹಿವಾಟಿನ ಸಾಧ್ಯತೆ, ಬಾಧ್ಯತೆಗಳನ್ನು ತೀರಿಸಿಕೊಂಡು ವ್ಯಾಪಾರ ಮರು ಆರಂಭಿಸಲು ಇದನ್ನು ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಇದಕ್ಕಾಗಿ ಸರ್ಕಾರ 4.5 ಲಕ್ಷ ಕೋಟಿ ರೂ. ಗಳನ್ನು ಮೀಸಲಿರಿಸಿದೆ. ಇದಕ್ಕೆ 100% ಗಳಷ್ಟು ಗ್ಯಾರಂಟಿ ಸಹ ಸರ್ಕಾರ ನೀಡುವುದಾಗಿ ಹೇಳಿದೆ. ಈ ಸಂಬಂಧ ಎಂಎಸ್ಎಂಇಗಳಿಗೆ ನೆರವಾಗುವ ದೃಷ್ಟಿಯ ಫ್ಯಾಕ್ಟರಿಂಗ್ ರೆಗ್ಯುಲೇಷನ್ ಬಿಲ್ 2021 ನ್ನು ಸಹ ಸಂಸತ್ ಅಂಗೀಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.