ನವದೆಹಲಿ: ಭಾರತಕ್ಕೆ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲ, ಆತನಿಗೆ ನಾವು ಆಶ್ರಯ ನೀಡಿಲ್ಲ ಎಂದು ಹೇಳುತ್ತಾ ಬರುತ್ತಿರುವ ಪಾಕಿಸ್ಥಾನದ ನಿಜ ಬಣ್ಣ ಮತ್ತೊಮ್ಮೆ ಬಯಲಾಗಿದೆ.
1993ರ ಮುಂಬಯಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದ ಕರಾಚಿಯಲ್ಲಿಯೇ ಇದ್ದಾನೆ ಎಂಬುದನ್ನು ಸಾಬೀತುಪಡಿಸುವ ಡಾಕ್ಯುಮೆಂಟರಿ ಸಾಕ್ಷಿಗಳು ಭಾರತದ ರಕ್ಷಣಾ ಏಜೆನ್ಸಿಗಳಿಗೆ ದೊರೆತಿದೆ.
ರಕ್ಷಣಾ ಏಜೆನ್ಸಿಗೆ ಸಿಕ್ಕಿರುವ ಸಾಕ್ಷಿಯ ಪ್ರಕಾರ, ದಾವೂದ್, ಆತನ ಪತ್ನಿ ಮೆಹಜಬೀನ್ ಶೇಖ್, ಮಗ ಮೋಯಿನ್ ನವಾಝ್, ಮಗಳು ಮೆಹ್ರೂಖ್, ಮೆಹ್ರೀನ್, ಮಝಿಯ ಪ್ರಸ್ತುತ ಕರಾಚಿಯಲ್ಲಿ ನೆಲೆಸಿದ್ದಾರೆ.
ಮೆಹ್ರೂಕ್ ಪಾಕ್ನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾದದ್ ಮಗ ಜುನೈದ್ನನ್ನು ಮದುವೆಯಾಗಿದ್ದಾಳೆ.
ದಾವೂದ್ ಪತ್ನಿಯ ಹೆಸರಿನಲ್ಲಿ 2015ರ ಎಪ್ರಿಲ್ನಲ್ಲಿ ಬಂದ ದೂರವಾಣಿ ಬಿಲ್ ಕೂಡ ಭಾರತೀಯ ರಕ್ಷಣಾ ಏಜೆನ್ಸಿಗಳಿಗೆ ದೊರೆತಿವೆ. ಈ ಬಿಲ್ನಲ್ಲಿನ ವಿಳಾಸ ಕರಾಚಿಯಲ್ಲಿದೆ. ಈತನ ಕುಟುಂಬ ದುಬೈಯಿಂದ ಪಾಕಿಸ್ಥಾನಕ್ಕೆ ಪ್ರಯಾಣ ಬೆಳೆಸಿದ ದಾಖಲೆಗಳು ಕೂಡ ಲಭ್ಯವಾಗಿದೆ.
ಪಾಕಿಸ್ಥಾನದ ಪಾಸ್ಪೋರ್ಟ್ನಲ್ಲಿರುವ ದಾವೂದ್ನ ಇತ್ತೀಚಿನ ಭಾವಚಿತ್ರವನ್ನು ಕೂಡ ರಕ್ಷಣಾ ಏಜೆನ್ಸಿಗೆ ದೊರೆತಿದೆ. ಪಾಕಿಸ್ಥಾನದಲ್ಲಿ ನೆಲೆಸಿರುವ ಈತನ ಕೆಲ ಸಹಚರರು ನಿರಂತರವಾಗಿ ದುಬೈಗೆ ಭೇಟಿ ಕೊಡುತ್ತಿರುವ ಬಗ್ಗೆಯೂ ಮಾಹಿತಿ ದೊರೆತಿದೆ.
ಈ ಎಲ್ಲಾ ಸಾಕ್ಷಿಗಳು ಪಾಕಿಸ್ಥಾನದ ನಿಜ ಬಣ್ಣವನ್ನು ಬಯಲುಮಾಡಿದೆ. ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಪೋಷಿಸುತ್ತಿರುವ ಆ ದೇಶ ಜಾಗತಿಕ ಮಟ್ಟದಲ್ಲಿ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.