ನವದೆಹಲಿ: ದೇಶದ ರಾಜಧಾನಿಯಲ್ಲಿ ಉತ್ತರ ಪ್ರದೇಶದ ಒಡೆತನಕ್ಕೆ ಸೇರಿದ ಆಸ್ತಿಯಲ್ಲಿ ರೋಹಿಂಗ್ಯಾ ಅಕ್ರಮ ಒಳನುಸುಳುಕೋರರು ನಿರ್ಮಾಣ ಮಾಡಿದ್ದ ಅಕ್ರಮ ನಿರ್ಮಾಣಗಳನ್ನು ಯೋಗಿ ಸರ್ಕಾರ ನೆಲಸಮಗೊಳಿಸಿದೆ.
ನವದೆಹಲಿಯ ಮದನ್ಪುರ ಕಾದರ್ನಲ್ಲಿ ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವಾಲಯದ ಒಡೆತನಕ್ಕೆ ಸೇರಿದ 150 ಕೋಟಿ ರೂ. ಮೌಲ್ಯದ 2.1 ಹೆಕ್ಟೇರ್ ಭೂಮಿಯನ್ನು ರೊಹಿಂಗ್ಯಾ ನುಸುಳುಕೋರರು ಆಕ್ರಮಿಸಿಕೊಂಡು, ಅಕ್ರಮ ನಿರ್ಮಾಣಗಳನ್ನು ಮಾಡಿದ್ದರು. ಈ ಸಂಬಂಧ ನವದೆಹಲಿ ಸರ್ಕಾರಕ್ಕೆ ಮಾಹಿತಿ ನೀಡಿದ ಬಳಿಕ ತೆರವು ಕಾರ್ಯಗಳನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಂಬಂಧ ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವ ಮಹೇಂದ್ರ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನವದೆಹಲಿಯ ಎಲ್ಜಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು, ಸ್ಥಳೀಯ ಪ್ರಾಧಿಕಾರಗಳಿಗೆ ಅಕ್ರಮ ತೆರವಿಗೆ ಸಂಬಂಧಿಸಿದಂತೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಈ ಕಾರ್ಯದಲ್ಲಿ ನವದೆಹಲಿ ಪೊಲೀಸರು ತಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಸರಿತಾ ವಿಹಾರ್ದಲ್ಲಿನ 6 ಹೆಕ್ಟೇರ್ ಭೂಮಿಯನ್ನು ಸಹ ವಲಸಿಗರಿಂದ ಉತ್ತರ ಪ್ರದೇಶದ ಸರ್ಕಾರ ಅಕ್ರಮ ತೆರವು ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.