ಬೆಂಗಳೂರು: ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡುಗಳ ವಿಚರಣೆಯನ್ನು ಚುರುಕುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಸಾರ್ವಜನಿಕರಿಗೆ ಶುಲ್ಕವಿಲ್ಲದೆ ಸಾರ್ವತ್ರಿಕ, ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲು ಇಲಾಖೆ ಬದ್ಧವಾಗಿದೆ. ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮದೊಳಗೆ ಸೇರಬೇಕಾದರೆ, ಎಲ್ಲಾ ಕುಟುಂಬಗಳು, ಸದಸ್ಯರು ಆರೋಗ್ಯ ಕಾರ್ಡ್ ಹೊಂದುವುದು ಮುಖ್ಯವಾಗಿದೆ ಎಂದು ಇಲಾಖೆ ಹೇಳಿದೆ.
ಈ ಹಿಂದಿನ ವರ್ಷಗಳಲ್ಲಿ ತ್ವರಿತ ಗತಿಯಲ್ಲಿ, ಕಾರ್ಡುಗಳ ವಿತರಣೆಯ ವೇಗ ಹೆಚ್ಚಿತ್ತು. ಆದರೆ 2021 ರ ಜನವರಿ ತಿಂಗಳಿನಿಂದ ಮೇ ತಿಂಗಳ ವರೆಗೆ ಅತೀ ಕಡಿಮೆ ಪ್ರಮಾಣದಲ್ಲಿ ಕಾರ್ಡು ವಿತರಣೆ ಮಾಡಲಾಗಿದೆ. ಕೇವಲ 530 ಕಾರ್ಡುಗಳ ವಿತರಣೆಯಷ್ಟೇ ರಾಜ್ಯಾದ್ಯಂತ ನಡೆದಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಈ ಸುತ್ತೋಲೆ ತಲುಪಿದ ಕೂಡಲೇ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಡು ವಿತರಣಾ ವೇಗ ಹೆಚ್ಚಿಸುವಂತೆ ಇಲಾಖೆ ಹೇಳಿದೆ.
ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್ಗಳ ವಿತರಣೆಯನ್ನು ಚುರುಕುಗೊಳಿಸುವ ಕುರಿತು.@CMofKarnataka @mla_sudhakar @BBMPCOMM @KannadaGrahaka @Star_Of_Mysore @mysuruvarthe @Hubballi_Infra @DharwadVarthe @kodaguvarthe @b_rural_dipr @karnatakavarthe @PIBBengaluru pic.twitter.com/r4y4ma8JCU
— K'taka Health Dept (@DHFWKA) July 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.