ನವದೆಹಲಿ : ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನುಷ್ಠಾನ ಮತ್ತು ಪ್ರಸಕ್ತ ಋತುವಿನಲ್ಲಿ 2021-22 ರಲ್ಲಿ ದಾಖಲೆ ಮಟ್ಟದ 433.24 ಎಲ್ಎಂಟಿಯ ಗೋಧಿ ಸಂಗ್ರಹವನ್ನು ಖರೀದಿಸಲಾಗಿದ್ದು, ಹಿಂದಿನ 389.93 ಎಲ್ಎಂಟಿ (ಆರ್ಎಂಎಸ್ 20-21) ಅನ್ನು ಮೀರಿಸಿದೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ತಮ್ಮ ಅತ್ಯುತ್ತಮ ಗೋಧಿ ಖರೀದಿ ಅಂಕಿಅಂಶಗಳನ್ನು ದಾಖಲಿಸಿದ್ದು, ಕಳೆದ ವರ್ಷ 43.35 ಲಕ್ಷ ರೈತರಿಗೆ ಹೋಲಿಸಿದರೆ ಈ ವರ್ಷದ ದಾಖಲೆಯ 49.16 ಲಕ್ಷ ರೈತರಿಗೆ ಅನುಕೂಲವಾಗಿದೆ ಒನ್ ನೇಷನ್, ಒನ್ ಎಂಎಸ್ಪಿ, ಒನ್ ಡಿಬಿಟಿ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತರಲಾಗಿದೆ ಮತ್ತು ಸಾರ್ವಕಾಲಿಕ ಹೆಚ್ಚಿನ ಮೊತ್ತದ 84,369.19 ಕೋಟಿ ರೂ.ಗಳನ್ನು ನೇರವಾಗಿ ಭಾರತದಾದ್ಯಂತ ರೈತರ ಖಾತೆಗೆ ವರ್ಗಾಯಿಸಲಾಗಿದೆ.
2020-21ರಲ್ಲಿ 4 ನೇ ಜುಲೈ, 2021 ರವರೆಗೆ ದಾಖಲೆಯ ಪ್ರಮಾಣದ 862.01 ಎಲ್ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ. ಇದು ಕಳೆದ ವರ್ಷದ ಒಟ್ಟು 770.93 ಎಲ್ಎಂಟಿ ಭತ್ತದ ಸಂಗ್ರಹವನ್ನು ಮೀರಿದೆ ಮತ್ತು ಖರೀದಿ ಮುಂದುವರಿದರೆ ಅದು ಸುಮಾರು 900 ಎಲ್ಎಂಟಿ ತಲುಪಬಹುದು. ಈ ವರ್ಷ ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು ತಮ್ಮ ಅತ್ಯುತ್ತಮ ಖರೀದಿ ಅಂಕಿಅಂಶಗಳನ್ನು ಮೀರಿಸಿದೆ. ಕಳೆದ ವರ್ಷ 124.59 ಲಕ್ಷ ರೈತರಿಗೆ ಹೋಲಿಸಿದರೆ ಇದುವರೆಗೆ 127.15 ಲಕ್ಷ ರೈತರು ಲಾಭ ಪಡೆದಿದ್ದಾರೆ. ಸಾರ್ವಕಾಲಿಕ ಗರಿಷ್ಠ, 1,52,169.30 ಕೋಟಿ ರೂ. ಎಂಎಸ್ಪಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಪಿಎಂಜಿಕೆಎ-ಐ ಮತ್ತು II (ಎಪ್ರಿಲ್ 2020 – ನವೆಂಬರ್ 2020) ಅವಧಿಯಲ್ಲಿ ಪಿಎಂಜಿಕೆಎ ಯೋಜನೆಯಡಿ ಒಟ್ಟು 305 ಎಲ್ಎಂಟಿ ಆಹಾರ ಧಾನ್ಯಗಳನ್ನು ಪಡೆಯಲಾಗಿದೆ. ಪಿಎಂಜಿಕೆ -3 ಗಾಗಿ, ಒಟ್ಟು 78.26 ಎಲ್ಎಂಟಿ ಆಹಾರ ಧಾನ್ಯಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮೇ – ಜೂನ್ 2021 ಕ್ಕೆ ಎರಡು ತಿಂಗಳು ಪಡೆದಿವೆ. ಪಿಎಂಜಿಕೆಎವೈ-IV ಅಡಿಯಲ್ಲಿ ಒಟ್ಟು 198.78 ಎಲ್ಎಂಟಿ ಆಹಾರ ಧಾನ್ಯಗಳನ್ನು ಮುಂದಿನ ಐದು ತಿಂಗಳಿಗಾಗಿ ಅಂದರೆ ಜುಲೈ ನಿಂದ ನವೆಂಬರ್ 2021 ರವರೆಗೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ 3.99 ಎಲ್ಎಂಟಿ ಆಹಾರ ಧಾನ್ಯಗಳನ್ನು ಇದುವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಡೆದುಕೊಂಡಿವೆ.
ಎಫ್ಸಿಐ 2019-20ರ ಅವಧಿಯಲ್ಲಿ 389 ಎಲ್ಎಂಟಿ ಧಾನ್ಯಗಳನ್ನು ಸಾಗಿಸಿದ್ದಕ್ಕೆ ಹೋಲಿಸಿದಾಗ 2020-21ರ ಅವಧಿಯಲ್ಲಿ 594 ಎಲ್ಎಮ್ಟಿ ಆಹಾರದ ಧಾನ್ಯಗಳನ್ನು ಸಾಗಿಸಿದೆ. ಎಫ್ಸಿಐ 25 ಮಾರ್ಚ್ 2020 ರಿಂದ ಮಾರ್ಚ್ 31, 2021 ರವರೆಗೆ 945.92 ಎಲ್ಎಂಟಿ ಆಹಾರ ಧಾನ್ಯಗಳನ್ನು ದಾಖಲೆಯ ಪ್ರಮಾಣದಲ್ಲಿ ನೀಡಲಾಗಿದೆ ಮತ್ತು 2021 ರ ಏಪ್ರಿಲ್ 01 ರಿಂದ 2021 ಜೂನ್ 30 ರವರೆಗೆ 208.05 ಎಲ್ಎಂಟಿ ಆಹಾರ ಧಾನ್ಯಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಸಾಮಾನ್ಯ ಅವಧಿಯಲ್ಲಿ, ಸೆಂಟ್ರಲ್ ಪೂಲ್ನಿಂದ ಪಡೆಯುವ ಮಾಸಿಕ ಸರಾಸರಿ ಆಹಾರ ಧಾನ್ಯಗಳು 50 ಎಲ್ಎಂಟಿಯಾಗಿದ್ದು, 2020-21ರ ಅವಧಿಯಲ್ಲಿ ತಿಂಗಳಿಗೆ 77.40 ಎಲ್ಎಂಟಿಗೆ ಏರಿದೆ.
ಪಿಎಂಜಿಕೆ 3-4 ಮತ್ತು ಒಎನ್ಒಆರ್ ಸಿ ಯೋಜನೆಯ ಅನುಷ್ಠಾನ ಮತ್ತು ಪ್ರಗತಿಯ ಉತ್ತಮವಾಗಿದ್ದು, ಪಿಎಂಜಿಕೆ 3 ಮತ್ತು 4 ರ ಅಡಿಯಲ್ಲಿ ಸುಮಾರು 80 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಫಲಾನುಭವಿಗಳಿಗೆ ಮೇ 2021 ರಿಂದ ನವೆಂಬರ್ 2021 ರವರೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ.ಯನ್ನು ನೀಡಲಾಗುತ್ತಿದೆ.
ಸಾಂಕ್ರಾಮಿಕದಿಂದಾಗಿ ಉಂಟಾದ ಹಿಂದೆಂದೂ ಕಾಣದ ಆರ್ಥಿಕ ಅಡೆತಡೆಗಳಿಂದಾಗಿ ಬಡವರ ಮತ್ತು ನಿರ್ಗತಿಕರ ಆಹಾರ ಭದ್ರತಾ ತೊಂದರೆಗಳನ್ನು ತಗ್ಗಿಸಲು ಮೇ ಮತ್ತು ಜೂನ್ 2021 ಅವಧಿಯ ಒಟ್ಟು 79.39 ಎಲ್ಎಂಟಿ (41.85 ಎಲ್ಎಂಟಿ ಅಕ್ಕಿ ಮತ್ತು 37.54 ಎಲ್ಎಂಟಿ ಗೋಧಿ) ಯನ್ನು ಪಿಎಂಜಿಕೆ -3 ಅಡಿಯಲ್ಲಿ ಫಲಾನುಭವಿಗಳಿಗೆ ಒದಗಿಸಲಾಗಿದೆ. ಪಿಎಂಜಿಕೆ ಹಂತ -4ರಲ್ಲಿ ಒಟ್ಟು 198.78 ಎಲ್ಎಂಟಿ (107.58 ಎಲ್ಎಂಟಿ ಅಕ್ಕಿ + 91.20 ಎಲ್ಎಂಟಿ ಗೋಧಿ) ಅನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈನಿಂದ ನವೆಂಬರ್ 2021 ಅವಧಿಗೆ ಹಂಚಿಕೆ ಮಾಡಲಾಗಿದೆ, ಇದು ಮಾಸಿಕ ಸಬ್ಸಿಡಿ ಪಡೆಯುವ ಎನ್ಎಫ್ಎಸ್ಎ ಆಹಾರ ಧಾನ್ಯಗಳು ಪ್ರತಿ ಎಎವೈ ಮನೆಯೊಂದಕ್ಕೆ 35 Kg ತಿಂಗಳು ಮತ್ತು ಪ್ರತಿ ಪಿಎಚ್ಎಚ್ ವ್ಯಕ್ತಿಗೆ 5 ಕೆ.ಜಿ. ನೀಡುವ ಪ್ರಮಾಣಗಳ ಹೊರತಾಗಿದೆ. ಜುಲೈ 5 ರ ಹೊತ್ತಿಗೆ, ಪಿಎಂಜಿಕೆ -3 ನಲ್ಲಿ, ಒಟ್ಟು 88.9% ಅಂದರೆ 70.6 ಎಲ್ಎಂಟಿ ಆಹಾರ ಧಾನ್ಯಗಳನ್ನು ಈಗಾಗಲೇ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಪಿಎಂಜಿಕೆಎಯ ಹಂತ -4 (ಜುಲೈನಿಂದ ನವೆಂಬರ್ 2021) ರಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗೆ ಜೂನ್ 24 ರೊಳಗೆ 5 ತಿಂಗಳವರೆಗೆ 198.78 ಎಲ್ಎಂಟಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ. ಎಫ್ಸಿಐ / ಸೆಂಟ್ರಲ್ ಪೂಲ್ (ಕೇಂದ್ರ ಉಗ್ರಾಣ) ನಿಂದ 16 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳನ್ನು ಪಡೆಯುವುದನ್ನು ಪ್ರಾರಂಭಿಸಲಾಗಿದೆ ಮತ್ತು ಸುಮಾರು 4 ಎಲ್ಎಂಟಿ ಆಹಾರ ಧಾನ್ಯಗಳನ್ನು 2021 ರ ಜುಲೈ 05 ರವರೆಗೆ ಪಡೆಯಲಾಗಿದೆ ಎಂದು ಅವರು ಹೇಳಿದರು. 7 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ- IVರ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇಲ್ಲಿಯವರೆಗೆ (5 ನೇ ಜುಲೈ), ಸುಮಾರು 14,700 ಮೆ.ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಅನ್ನು ಈಗ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದೆ ಮತ್ತು ಉಳಿದ ರಾಜ್ಯಗಳು ಮುಂದಿನ ದಿನಗಳಲ್ಲಿ ಇದನ್ನು ಸಕ್ರಿಯಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಅಡಿಯಲ್ಲಿ ಸರಾಸರಿ 1.5 ಕೋಟಿ ಮಾಸಿಕ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ.
ಅಂದಾಜು 3,500 ಕೋಟಿ ರೂ.ನಷ್ಟು ಆಹಾರ ಸಹಾಯಧನದಲ್ಲಿ ಏಪ್ರಿಲ್, ಮೇ ಮತ್ತು ಜೂನ್ 2021 ರಲ್ಲಿ ಕ್ರಮವಾಗಿ ಸುಮಾರು 1.4 ಕೋಟಿ, 1.5 ಕೋಟಿ ಮತ್ತು 1.35 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ಎನ್ಎಫ್ಎಸ್ಎ ಮತ್ತು ಪಿಎಂಜಿಕೆಎ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ,
ಆಗಸ್ಟ್ 2019 ರಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆ ಪ್ರಾರಂಭವಾದಾಗಿನಿಂದ ಈ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 29.3 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ನಡೆದಿವೆ. ಈ ಪೈಕಿ ಸುಮಾರು 21.25 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ಏಪ್ರಿಲ್ನಲ್ಲಿ 2020 ರಿಂದ ಜೂನ್ 2021 ರವರೆಗಿನ ಕೋವಿಡ್ -19 ಅವಧಿಯಲ್ಲಿ ದಾಖಲಾಗಿದೆ. ಒಎನ್ಒಆರ್ಸಿ ಮೂಲಕ 20,000 ಕೋಟಿ ರೂ.ಗಳಷ್ಟು ಆಹಾರ ಸಬ್ಸಿಡಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.