ನವದೆಹಲಿ : 2026-27 ರೊಳಗೆ ದೇಶದ ಪ್ರತಿಯೊಂದು ಮಗುವೂ ಮೂಲ ಓದು, ಬರವಣಿಗೆ, ಸಾಕ್ಷರತೆ ಮತ್ತು ಸಂಖ್ಯೆಗಳನ್ನು ಕಲಿಯುವುದನ್ನು ಖಾತ್ರಿಪಡಿಸುವ ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವ ಪ್ರಾವೀಣ್ಯಕ್ಕಾಗಿ ರಾಷ್ಟ್ರೀಯ ಉಪಕ್ರಮ (ನಿಪುಣ ಭಾರತ) ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಿರು ವಿಡಿಯೋ, ಗೀತೆ ಮತ್ತು ನಿಪುಣ ಭಾರತ ಕಾರ್ಯಕ್ರಮದ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಲಾಯಿತು.
ಈ ಮಿಷನ್ ಅನ್ನು ಸಮಗ್ರ ಶಿಕ್ಷಾ ಯೋಜನೆ ಅಡಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಆರಂಭಿಸಲಾಗಿದ್ದು, ಇದರಡಿ ಶಾಲಾ ಶಿಕ್ಷಣದ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಲಭ್ಯತೆಯನ್ನು ಒದಗಿಸುವುದು; ಶಿಕ್ಷಕರ ಸಾಮರ್ಥ್ಯವೃದ್ಧಿ; ಮಕ್ಕಳು ಮತ್ತು ಶಿಕ್ಷಕರಿಗೆ ವಿಭಿನ್ನ ಸಂಪನ್ಮೂಲ/ಕಲಿಕಾ ಸಾಮಗ್ರಿ, ಉನ್ನತ ಗುಣಮಟ್ಟದ ಅಭಿವೃದ್ಧಿ ಮತ್ತು ಕಲಿಕಾ ಫಲಿತಾಂಶಗಳ ಸಾಧನೆಗೆ ಪ್ರತಿಯೊಂದು ಮಗುವಿನ ಪ್ರಗತಿಯ ಮೇಲೆ ನಿಗಾವಹಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೋಖ್ರಿಯಾಲ್ ಅವರು, ನಿಪುಣ್ ಭಾರತದಡಿ 3 ರಿಂದ 9 ವರ್ಷದೊಳಗಿನ ಮಕ್ಕಳ ಕಲಿಕಾ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದರು. ಶಿಕ್ಷಕರು ಪ್ರತಿಯೊಂದು ಮಗುವಿಗೂ ಮೂಲ ಭಾಷೆ ಕಲಿಕೆಯಲ್ಲಿ ಅಭಿವೃದ್ಧಿಪಡಿಸಬೇಕು. ಓದು, ಬರವಣಿಗೆ ಮತ್ತು ಸಂಖ್ಯಾ ಕೌಶಲ್ಯ ಅವರನ್ನು ಉತ್ತಮ ಓದುಗರು ಮತ್ತು ಬರಹಗಾರರನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದರು. ಆದ್ದರಿಂದ ನಿಪುಣ ಭಾರತದಡಿ ಮೂಲ ಕಲಿಕೆ ಹಂತ ಸಮಗ್ರ, ಅಂತರ್ಗತ, ಎಲ್ಲವನ್ನು ಒಳಗೊಂಡ ಆನಂದಕರ ಮತ್ತು ತೊಡಗಿಸಿಕೊಂಡ ಕಲಿಕಾ ಅನುಭವ ನೀಡಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ಎಲ್ಲ ಮಕ್ಕಳಿಗೆ ಮೂಲ ಸಾಕ್ಷರತೆ (ಓದು, ಬರಹ) ಮತ್ತು ಸಂಖ್ಯಾಶಾಸ್ತ್ರ ಕಲಿಯುವಂತೆ ಮಾಡುವುದು ತಕ್ಷಣದ ರಾಷ್ಟ್ರೀಯ ಮಿಷನ್ ಉದ್ದೇಶವಾಗಿದೆ ಎಂದು ಸಚಿವರು ಪ್ರತಿಪಾದಿಸಿದರು. ಅದನ್ನು ಗಮನದಲ್ಲಿರಿಸಿಕೊಂಡು ಇಲಾಖೆ ನಿಪುಣ ಭಾರತ ಅಡಿಯಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ. ಅದಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಪಾಲುದಾರರು ಮತ್ತು ತಜ್ಞರ ಜೊತೆ ಸರಣಿ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ, ಸರಳ ಮತ್ತು ಸುಲಭವಾಗಿಸಬೇಕು ಎಂದರು. ಮೂಲಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಕೆಲವು ತಾಂತ್ರಿಕ ಆಯಾಮಗಳನ್ನು ಇದು ಒಳಗೊಂಡಿದೆ. ಜೊತೆಗೆ ರಾಷ್ಟ್ರ, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಶಾಲಾ ಹಂತದಲ್ಲಿ ಪರಿಣಾಮಕಾರಿ ಅನುಷ್ಠಾನ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದರು. 2021-22ನೇ ಸಾಲಿನಲ್ಲಿ ಮೂಲ ಹಂತದಲ್ಲಿ ನಾನಾ ಮಧ್ಯ ಪ್ರವೇಶ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಗ್ರ ಶಿಕ್ಷಾ ಯೋಜನೆ ಅಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 2688.18 ಕೋಟಿ ರೂ.ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಮಿಷನ್ನ ಗುರಿಗಳ ವಿಭಿನ್ನ ಅಂಶವೆಂದರೆ, ಲಕ್ಷ್ಯ ಸೂಚಿ ಅಥವಾ ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳ ರೂಪದಲ್ಲಿ ನಿಗದಿಪಡಿಸಲಾಗಿದೆ. ಆದಾಗ್ಯೂ ಒಟ್ಟಾರೆ ಗುರಿ ಎಂದರೆ, ಮೂರನೇ ತರಗತಿಯ ಅಂತ್ಯದ ವೇಳೆಗೆ ಅಪೇಕ್ಷಿತ ಫಲಿತಾಂಶ ಗುರಿಗಳನ್ನು ಸಾಧಿಸುವುದಾಗಿದೆ. ಪೋಷಕರು, ಸಮುದಾಯ, ಸ್ವಯಂ ಸೇವಕರು ಇತ್ಯಾದಿ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಲಕ್ಷ್ಯಗಳನ್ನು ಬಾಲವಾಟಿಕದಿಂದ ಮೂರನೇ ತರಗತಿವರೆಗೆ ಅಭಿವೃದ್ಧಿಪಡಿಸಲಾಗಿದೆ. ಲಕ್ಷ್ಯಗಳನ್ನು ಎನ್ಸಿಇಆರ್ಟಿ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಮತ್ತು ಒಆರ್ಎಫ್ ಅಧ್ಯಯನಗಳನ್ನು ಆಧರಿಸಿ ಕಲಿಕಾ ಫಲಿತಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಉದಾಹರಣೆಗೆ ಮಗು ಅಪರಿಚಿತ ಪಠ್ಯವನ್ನು ಗ್ರಹಿಸಿ ಮತ್ತು ಸ್ಪಷ್ಟತೆಯೊಂದಿಗೆ ಎರಡನೇ ತರಗತಿ ವೇಳೆಗೆ ಪ್ರತಿ ನಿಮಿಷಕ್ಕೆ 45 ರಿಂದ 60 ಪದಗಳನ್ನು ಹಾಗೂ ಮೂರನೇ ತರಗತಿ ಕೊನೆಗೆ ಪ್ರತಿ ನಿಮಿಷಕ್ಕೆ ಕನಿಷ್ಠ 60 ಪದಗಳನ್ನು ಸರಿಯಾಗಿ ಓದುವಂತಾಗಬೇಕು.
ನಿಪುಣ ಭಾರತದ ಯಶಸ್ಸು ಮುಖ್ಯವಾಗಿ ಶಿಕ್ಷಕರನ್ನು ಅವಲಂಬಿಸಿದೆ. ಹಾಗಾಗಿ ಶಿಕ್ಷಕರ ಸಾಮರ್ಥ್ಯವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಎನ್ಸಿಇಆರ್ಟಿ ಮೂಲಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಅಡಿಯಲ್ಲಿ ನಿಶ್ಚಿತ ವಿಶೇಷ ಪ್ಯಾಕೇಜ್ ಅಭಿವೃದ್ಧಿಪಡಿಸಿದ್ದು, ಈ ವರ್ಷ ಎಫ್ಎಲ್ಎನ್ ಅಡಿ ಪೂರ್ವ ಪ್ರಾಥಮಿಕದಿಂದ ಪ್ರಾಥಮಿಕ ತರಗತಿವರೆಗೆ ಕಲಿಕೆಯಲ್ಲಿ ತೊಡಗಿರುವ ಸುಮಾರು 25 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.
ನಿಪುಣ ಭಾರತ ಮಿಷನ್ ಗುರಿ ಮತ್ತು ಉದ್ದೇಶ
🔷 ಮಕ್ಕಳು ತರಗತಿಗಳಲ್ಲಿ ಉಳಿಯುವಂತಾಗಲು ಮೂಲ ಕೌಶಲ್ಯವನ್ನು ಕಲಿಸಲಾಗುವುದು. ಆ ಮೂಲಕ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ತಗ್ಗಿಸಲಾಗುವುದು ಮತ್ತು ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಹಂತಕ್ಕೆ ವರ್ಗಾವಣೆಯಾಗುವ ದರವನ್ನು ಸುಧಾರಿಸುವುದು.
🔷 ಚಟುವಟಿಕೆ ಆಧಾರಿತ ಕಲಿಕೆ ಮತ್ತು ಪೂರಕ ಕಲಿಕಾ ವಾತಾವರಣದಿಂದಾಗಿ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಲಿದೆ. ನವೀನ ಕಲಿಕಾ ವಿಧಾನಗಳು ಅಂದರೆ ಆಟಿಕೆಗಳ ಆಧರಿತ ಅಥವಾ ಪ್ರಯೋಗಾತ್ಮಕ ಕಲಿಕೆಗಳನ್ನು ಶಾಲಾ ತರಗತಿಗಳಲ್ಲಿ ಬಳಸಲಾಗುವುದು. ಆ ಮೂಲಕ ಕಲಿಕೆ ಆನಂದಕರ ಮತ್ತು ತೊಡಗಿಸಿಕೊಳ್ಳುವ ಚಟುವಟಿಕೆಯನ್ನಾಗಿ ಮಾಡಲಾಗುವುದು.
🔷 ಶಿಕ್ಷಕರ ಸಮಗ್ರ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳಿಂದಾಗಿ ಅವರ ಸಬಲೀಕರಣವಾಗುವುದಲ್ಲದೆ, ಅವರಿಗೆ ಶಿಕ್ಷಣ ಶಾಸ್ತ್ರದ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾಯತ್ತತೆ ದೊರಕಲಿದೆ.
🔷 ನಾನಾ ಅಭಿವೃದ್ಧಿಯ ಅಂಶಗಳಿಗೆ ಅಂದರೆ ದೈಹಿಕ ಮತ್ತು ಮೋಟಾರು ಅಭಿವೃದ್ಧಿ, ಸಾಮಾಜಿಕ – ಭಾವನಾತ್ಮಕ ಅಭಿವೃದ್ಧಿ, ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಅಭಿವೃದ್ಧಿ, ಅರಿವಿನ ಅಭಿವೃದ್ಧಿ, ಜೀವನ ಕೌಶಲ್ಯ ಇತ್ಯಾದಿ ಸೇರಿ ಮಗುವಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಇವೆಲ್ಲಾ ಅಂತರ ಸಂಬಂಧ ಮತ್ತು ಅಂತರ್ ಅವಲಂಬನೆಗೊಂಡಿವೆ. ಇವು ಮಕ್ಕಳ ಸಮಗ್ರ ಪ್ರಗತಿ ಮೇಲೆ ಪ್ರತಿಫಲನಗೊಳ್ಳಲಿವೆ.
🔷 ಮಕ್ಕಳು ಇ-ಕಲಿಕಾ ಪಥದಲ್ಲಿ ಕಲಿಯುವುದರಿಂದ ಅವರ ನಂತರದ ಜೀವನದ ಮೇಲೆ ಪರಿಣಾಮವಾಗಲಿದೆ.
🔷 ಪ್ರತಿಯೊಂದು ಮಗುವೂ ಆರಂಭಿಕ ಶಿಕ್ಷಣವನ್ನು ಪಡೆಯುವುದರಿಂದ ಈ ಹಂತ ಸಾಮಾಜಿಕ ಆರ್ಥಿಕ ದುರ್ಬಲ ವರ್ಗಕ್ಕೂ ಕೂಡ ಅನುಕೂಲವಾಗಲಿದೆ. ಆ ಮೂಲಕ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.