ಶ್ರೀನಗರ: ಅಭಿವೃದ್ಧಿ ಪಥದಲ್ಲಿ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಈ ಸುದ್ದಿ ನಿಜಕ್ಕೂ ಭಾರತ ಯಾವ ಕಾಲದಲ್ಲಿದೆ ಎಂಬುದನ್ನು ಮರುಚಿಂತಿಸುವಂತೆ ಮಾಡುತ್ತದೆ.
ಮುಹಮ್ಮದ್ ಸುಭಾನ್ ವಾನಿ, ಇವರು 1988ರಲ್ಲಿ ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಗುಡಿಸುವ ಮತ್ತು ಚೌಕೀದಾರ್ ಕಾರ್ಯಕ್ಕೆ ನಿಯೋಜಿತರಾಗಿ 2005ರಲ್ಲಿ ನಿವೃತ್ತಿಯನ್ನು ಹೊಂದಿದ್ದಾರೆ. ತಮ್ಮ 17 ವರ್ಷಗಳ ಸೇವಾ ಅವಧಿಯಲ್ಲಿ ಇವರಿಗೆ ಸಿಕ್ಕಿದ್ದು ತಿಂಗಳಿಗೆ 25 ರೂಪಾಯಿ ಸಂಬಳ. ನಂಬಲಸಾಧ್ಯವಾದರೂ ಇದು ನಿಜ.
ಅವರ ನಿವೃತ್ತಿಯ ಬಳಿಕ ಆ ಕೆಲಸ ಅವರ ಮಗನಿಗೆ ದೊರೆತಿದೆ. ದುರಾದೃಷ್ಟವಶತ್ ಮಗನಿಗೂ ಅಷ್ಟೇ ಸಂಬಳವನ್ನು ನೀಡಲಾಗುತ್ತಿದೆ.
ಅದರಲ್ಲೂ ಮತ್ತಷ್ಟು ಆಘಾತ ನೀಡುವ ಸಂಗತಿಯೆಂದರೆ, ಈ ಸರ್ಕಾರಿ ಶಾಲೆಯನ್ನು ಸ್ಥಾಪಿಸಲು ವಾನಿಯವರು ತಮ್ಮ ಭೂಮಿಯನ್ನು ನೀಡಿದ್ದಾರೆ. ಭೂಮಿ ನೀಡಿದ ಪ್ರತಿಯಾಗಿ ಅವರಿಗೆ ಶಾಲೆಯಲ್ಲಿ ಉದ್ಯೋಗ ನೀಡಲಾಗಿದೆ. ಆದರೆ ಅವರು ಕನಸಲ್ಲೂ ಯೋಚಿಸದಷ್ಟು ಕಡಿಮೆ ಸಂಬಳಕ್ಕೆ ಅವರು ಅಲ್ಲಿ ದುಡಿಯಬೇಕಾದುದು ವಿಪರ್ಯಾಸ.
ಹಲವಾರು ಸಲ ಶಾಲಾ ಆಡಳಿತ ಮಂಡಳಿಯನ್ನು ವಿನಂತಿಸಿದರೂ ಅವರಿಗೆ ನ್ಯಾಯ ಸಿಕ್ಕಿಲ್ಲ, ಕಾನೂನು ಹೋರಾಟಕ್ಕೆ ಮುಂದಾದರೂ ಹಣವಿಲ್ಲದ ಕಾರಣ ಅದರಿಂದ ಹಿಂಸರಿಯಬೇಕಾಯಿತು. ಈಗಲೂ ಅವರು ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಓಡಾಡುತ್ತಲೇ ಇದ್ದಾರೆ.
ಅವರ ಮಗ ಮುಮ್ತಾಝ್ ಕಳೆದ ಎರಡು ತಿಂಗಳಿನಿಂದ ಈ 25 ರೂಪಾಯಿ ಸಂಬಳವನ್ನೂ ಪಡೆದುಕೊಂಡಿಲ್ಲ . ತಂದೆಯ ಹಾದಿಯಲ್ಲೇ ಈಗ ಮಗನೂ ನಡೆಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.