ನಾಸಿಕ್: ಪ್ರಸ್ತುತ ನಡೆಯುತ್ತಿರುವ ನಾಸಿಕ್ ಕುಂಭಮೇಳದಲ್ಲಿ ಆಯೋಜಿಸಲಾಗಿರುವ ಶಾಂತಿಯ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುವಂತೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳಿಗೆ, ಉಲ್ಫಾ, ಬೋಡೋ ಮುಂತಾದ ತೀವ್ರಗಾಮಿ ನಾಯಕರುಗಳಿಗೆ ಹಿಂದೂ ಸಾಧುಗಳು ಆಹ್ವಾನ ನೀಡಿದ್ದಾರೆ.
ಹುರಿಯತ್ ಕಾನ್ಫರೆನ್ಸ್, ಉಲ್ಫಾ, ಬೋಡೋ ನಾಯಕರಿಗೆ ಶಾಂತಿ ಚರ್ಚೆಗೆ ಆಹ್ವಾನ ನೀಡಿರುವುದಾಗಿ ಸ್ವಾಮಿ ಸದೋಕ್ಷಜನಂದ್ ಅವರು ತಿಳಿಸಿದ್ದಾರೆ.
‘ಒಂದು ಕಾಲದಲ್ಲಿ ನಮ್ಮ ದೇಶ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನಿಡಿತ್ತು, ಆದರೀಗ ನಾವೇ ಹಲವಾರು ಆಂತರಿಕ ಶಕ್ತಿಗಳಿಂದ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಈ ನಾಯಕರು ಶಾಂತಿಯ ಚರ್ಚೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಬೇಕು’ ಎಂದು ಅವರು ಹೇಳಿದ್ದಾರೆ.
ಆಧ್ಯಾತ್ಮ, ಯಜ್ಞ, ಸಾಧನದ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದಿರುವ ಅವರು, ನಾಸಿಕ್ ಕುಂಭಮೇಳ ಶಾಂತಿ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕ ಎಂದು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.