ನವದೆಹಲಿ: ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡುವ ಸಿದ್ಧತೆಗಳನ್ನು ಯುಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯುಕೆಯ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಡಳಿತವು ದ್ವಿಪಕ್ಷೀಯ ಮಾತುಕತೆ ಪ್ರಾರಂಭವಾಗುವ ಮೊದಲು 14 ವಾರಗಳ ಸಮಾಲೋಚನಾ ಅವಧಿಯನ್ನು ಘೋಷಿಸಿದೆ ಎಂದು ಮೂಲಗಳು ಘೋಷಿಸಿವೆ.
ಹವಾಮಾನ ಬದಲಾವಣೆ ಮತ್ತು ಹಂಚಿಕೆಯ ಭದ್ರತಾ ಬೆದರಿಕೆಗಳಂತಹ ವಿಷಯಗಳ ಬಗ್ಗೆ ಉತ್ತಮ ಸಹಕಾರವನ್ನು ಕೋರಿ ಪಿಎಂ ಜಾನ್ಸನ್ ಮತ್ತು ಪಿಎಂ ನರೇಂದ್ರ ಮೋದಿ ಅವರು ಏಪ್ರಿಲ್ನಲ್ಲಿ ಭಾಂದವ್ಯ ವೃದ್ಧಿಯ ವಾಗ್ದಾನ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
2019 ರಲ್ಲಿ ದಾಖಲಾದ 33 ಬಿಲಿಯನ್ನಿಂದ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ಉಭಯ ರಾಷ್ಟ್ರಗಳು ಗಮನ ಹರಿಸುತ್ತಿವೆ ಎಂಬುದು ಇಲ್ಲಿ ಗಮನಾರ್ಹ.
ಯುಕೆ ಅಂತರರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಭವಿಷ್ಯದ ಕೈಗಾರಿಕೆಗಳಲ್ಲಿ ಹೊಸ ಆಯಾಮವನ್ನು ವೃದ್ಧಿಸುವ ಒಪ್ಪಂದವನ್ನು ನಾವು ಬಯಸುತ್ತೇವೆ” ಎಂದು ಒತ್ತಿ ಹೇಳಿದರು.
ಯುಕೆ ಸರ್ಕಾರವು ವಿಸ್ಕಿಗೆ ಶೇ 150 ರಷ್ಟು ತೆರಿಗೆಯನ್ನು ಮತ್ತು ಬ್ರಿಟಿಷ್ ನಿರ್ಮಿತ ಕಾರುಗಳ ಮೇಲಿನ ಶೇ 125 ರಷ್ಟು ಸುಂಕವನ್ನು ತೆಗೆದುಹಾಕುವ ಆಶಯವನ್ನು ಹೊಂದಿದೆ ಎಂದು ಹೇಳಿದೆ, ಜೊತೆಗೆ ಬ್ರಿಟಿಷ್ ಸೇವಾ ಕಂಪನಿಗಳಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಸುಲಭವಾಗುವಂತೆ ಮಾಡುವುದಾಗಿ ತಿಳಿಸಿದೆ.
ಬ್ರೆಕ್ಸಿಟ್ ನಂತರದ ಸನ್ನಿವೇಶದಲ್ಲಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ನಡೆಸಲು ಯುಕೆ ಸಕ್ರಿಯವಾಗಿ ಎದುರು ನೋಡುತ್ತಿದೆ ಎಂಬುದು ಗಮನಾರ್ಹ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ನೊಂದಿಗೆ ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಆಶಯವೂ ಅದಕ್ಕೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.