ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸೇವಾ ಭಾರತಿ, ಕರ್ನಾಟಕ ಇದರ ವತಿಯಿಂದ ಪ್ರತಿನಿತ್ಯ ಅನೇಕ ಸೇವಾ ಚಟುವಟಿಕೆಗಳು ರಾಜ್ಯಾದ್ಯಂತ ನಡೆಯುತ್ತಿವೆ. ಮೇ 14ರ ತನಕದ ಸಲ್ಲಿಸಲಾದ ಸೇವೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಸೇವಾ ಚಟುವಟಿಕೆಗಳ ವಿವರಗಳು:
1.ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಯ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಒಟ್ಟು 169 ಕೇಂದ್ರಗಳಲ್ಲಿ ಸಹಾಯವಾಣಿಯು ಕಾರ್ಯನಿರ್ವಹಿಸುತ್ತಿದೆ.
2.ಲಸಿಕಾ ಅಭಿಯಾನಕ್ಕೆ ಪ್ರೋತ್ಸಾಹ ನೀಡಲಾಗಿದ್ದು, ಒಟ್ಟು 346 ಸ್ಥಾನಗಳಲ್ಲಿ 10771 ಮಂದಿಗೆ ಲಸಿಕೆ ನೀಡಲು ಸಹಕರಿಸಲಾಗಿದೆ. ಒಟ್ಟು 253 ಇತರ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಭಾಗಿತ್ವ ನೀಡಲಾಗಿದೆ. 952 ಕಾರ್ಯಕರ್ತರು ಈ ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.
3. 13 ನಗರಗಳಲ್ಲಿ ಕೋವಿಡ್ ಐಸೋಲೇಷನ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 1121 ಬೆಡ್ ವ್ಯವಸ್ಥೆ ಮಾಡಲಾಗಿದೆ. 650 ಕೋವಿಡ್ ಸೋಂಕಿತರು ಗುಣಮುಖರಾಗಿ ಮರಳಿದ್ದಾರೆ. 494 ಕಾರ್ಯಕರ್ತರು ಈ ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.
4. 2 ನಗರಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 50 ಆಕ್ಸಿಜನ್ ಬೆಡ್ ಹಾಗೂ 110 ಇತರ ಬೆಡ್ ವ್ಯವಸ್ಥೆ ಮಾಡಲಾಗಿದೆ. 130 ಕೋವಿಡ್ ಸೋಂಕಿತರು ಗುಣಮುಖರಾಗಿ ಮರಳಿದ್ದಾರೆ. 55 ಕಾರ್ಯಕರ್ತರು ಈ ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.
5. 66 ನಗರಗಳ ಸರಕಾರಿ ಕೋವಿಡ್ ಕೇರ್ ಕೇಂದ್ರಗಳಲ್ಲಿ 319 ಕಾರ್ಯಕರ್ತರು ವಿವಿಧ ರೀತಿಯ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಹಕಾರ ನೀಡಿದ್ದಾರೆ.
6. ಆನ್ಲೈನ್ ವೈದ್ಯ ಸಹಾಯವಾಣಿಯ ಮೂಲಕ 134 ಸ್ಥಾನಗಳಲ್ಲಿ 378 ವೈದ್ಯರ ಸಹಾಯದೊಂದಿಗೆ 2817 ಮಂದಿಗೆ ವೈದ್ಯಕೀಯ ಸಲಹೆ-ನೆರವು ನೀಡಲಾಗಿದೆ.
7. 64 ಸ್ಥಾನಗಳಲ್ಲಿ 26,567 ಮಂದಿಗೆ ಆಹಾರದ ಪ್ಯಾಕೆಟ್ಗಳನ್ನು ವಿತರಿಸಲಾಗಿದೆ.
8. ರಾಜ್ಯಾದ್ಯಂತ 105 ಸ್ಥಾನಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, 9388 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.
9. 27 ಸ್ಥಾನಗಳಲ್ಲಿ ಪ್ಲಾಸ್ಮಾದಾನದ ವ್ಯವಸ್ಥೆ ಮಾಡಲಾಗಿದ್ದು 151 ಮಂದಿಗೆ ಅಗತ್ಯವಿರುವ ಪ್ಲಾಸ್ಮಾ ನೀಡಲಾಗಿದೆ.
10. ರಾಜ್ಯದ 198 ಸ್ಥಾನಗಳಲ್ಲಿ 6895 ಮಂದಿಗೆ ಆಯುರ್ವೇದಿಕ್ ಕಷಾಯ ನೀಡಲಾಗಿದೆ.
11. ಮಾನಸಿಕ ಆರೋಗ್ಯ ಮತ್ತು ಸ್ಥೈರ್ಯ ಹೆಚ್ಚಿಸಲು ಆಪ್ತಸಲಹಾ ಕೇಂದ್ರಗಳನ್ನು 87 ಸ್ಥಾನಗಳಲ್ಲಿ ಆಯೋಜಿಸಲಾಗಿದ್ದು 3325 ಮಂದಿ ಇದರ ಲಾಭ ಪಡೆದಿದ್ದಾರೆ.
12. ರಾಜ್ಯಾದ್ಯಂತ 158 ಸ್ಥಾನಗಳಲ್ಲಿ ಸಂಘದ ಸ್ವಯಂಸೇವಕರು ಕೋವಿಡ್ ಸೋಂಕಿತ ಮೃತರ ಅಂತ್ಯಸಂಸ್ಕಾರ ಕ್ರಿಯೆಗಳನ್ನು ನಿರ್ವಹಿಸಿದ್ದಾರೆ.
13. 93 ಸ್ಥಾನಗಳಲ್ಲಿ ಮೃತದೇಹ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.