ತಿರುವನಂತಪುರಂ: ‘ಫ್ಯಾಸಿಸಮ್ ಮತ್ತು ನಾಜಿಸಂ’ ಕುರಿತ ಆನ್ಲೈನ್ ತರಗತಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಉಗ್ರಗಾಮಿ ದಂಗೆಗೆ ಕರೆ ನೀಡಿದ ಮತ್ತು ಆರ್ಎಸ್ಎಸ್, ಬಿಜೆಪಿಯನ್ನು ಮೂಲ-ಫ್ಯಾಸಿಸ್ಟ್ ಸಂಘಟನೆಗಳೆಂದು ಕರೆದ ಕೇರಳದ ಕೇಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಿಲ್ಬರ್ಟ್ ಸೆಬಾಸ್ಟಿಯನ್ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ಡಾ. ಗಿಲ್ಬರ್ಟ್ ಸೆಬಾಸ್ಟಿಯನ್ ಅಂತರರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರ ಮೇಲಿನ ಆರೋಪವನ್ನು ಪರಿಶೀಲಿಸಲು ಈ ಹಿಂದೆ ಉಪ ಕುಲಪತಿಗಳ ಮೂರು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಿದ್ದರು.
ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ ಗಿಲ್ಬರ್ಟ್ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿತ್ತು.
“2014 ರ ಬಿಜೆಪಿಯ ವಿಜಯದ ನಂತರ ಭಾರತ ಫ್ಯಾಸಿಸ್ಟ್ ದೇಶವಾಗಿದೆ. ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆ, ಒಟ್ಟಾಗಿ ಸಂಘ ಪರಿವಾರ್ ಎಂದು ಕರೆಯಲ್ಪಡುತ್ತದೆ, ಅಂದರೆ ಭಾರತದಲ್ಲಿ ಸಂಘ ಪರಿವಾರವನ್ನು (ಬಿಜೆಪಿ ಸೇರಿದಂತೆ) ಪ್ರೋಟೋ-ಫ್ಯಾಸಿಸ್ಟ್ ಎಂದು ಪರಿಗಣಿಸಬಹುದು” ಎಂದು ಅವರು ಪವರ್ ಪಾಯಿಂಟ್ ಸ್ಲೈಡ್ ಒಂದರಲ್ಲಿ ಹೇಳಿರುವುದು ದೃಢವಾಗಿದೆ. ಅಲ್ಲದೇ ಮೋದಿ ಸರ್ಕಾರ ವಿರುದ್ಧ ಅವರು ಉಗ್ರ ದಂಗೆಗೂ ಕರೆ ನೀಡಿದ್ದರು.
ಇದೀಗ ಅವರ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅವರು ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.