ನವದೆಹಲಿ: ಆರೋಗ್ಯ ಭಾರತಿಯು ದೆಹಲಿಯಲ್ಲಿ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದೆ. ದೆಹಲಿಯ ಜನತೆಗೆ ಈ ಸಂಸ್ಥೆಯು ಔಷಧಿ ಮತ್ತು ಕಧಾವನ್ನು ಉಚಿತವಾಗಿ ವಿತರಿಸುವುದಲ್ಲದೆ, ವೈದ್ಯಕೀಯ ಸಮಾಲೋಚನೆಯನ್ನು ಕೂಡ ಉಚಿತವಾಗಿ ನೀಡುತ್ತಿದೆ.
ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಆರೋಗ್ಯ ಭಾರತಿ ಕಧಾ ನೀಡುತ್ತಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರು ಇದನ್ನು ಪಡೆಯುತ್ತಿದ್ದಾರೆ.
ಕಿಂಗ್ಸ್ವೇ ಕ್ಯಾಂಪ್ನ ಆರ್ಬಿ ಆಸ್ಪತ್ರೆಯಲ್ಲೂ ಕೂಡ ಪ್ರತಿದಿನ ಕಧಾ ವಿತರಿಸಲಾಗುತ್ತಿದೆ. ಇಲ್ಲಿ ಪ್ರತಿದಿನ 500 ಕ್ಕೂ ಹೆಚ್ಚು ಜನರು ಇದನ್ನು ಪಡೆಯುತ್ತಿದ್ದಾರೆ.
39000 ಕ್ಕೂ ಹೆಚ್ಚು ಪ್ಯಾಕೆಟ್ ಕದಾವನ್ನು ವಿತರಿಸಲಾಗಿದೆ ಎಂದು ಆರೋಗ್ಯ ಭಾರತಿ ಹೇಳಿಕೊಂಡಿದೆ.
ಜನರಿಗೆ ವೈದ್ಯಕೀಯ ಸಮಾಲೋಚನೆ ನೀಡಲು ಆರೋಗ್ಯ ಭಾರತಿ ವೈದ್ಯರ ತಂಡವನ್ನು ಸಿದ್ಧಪಡಿಸಿದೆ. ಈ ವೈದ್ಯರ ತಂಡವು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ.
ಆರೋಗ್ಯ ಭಾರತಿಯ ದೆಹಲಿಯ ಮುಖ್ಯಸ್ಥ ಮತ್ತು ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಅಶ್ವನಿ ಮೆಹ್ತಾ ಅವರು ವೆಬ್ನಾರ್ಗಳ ಮೂಲಕ ಜನರಿಗೆ ನಿಯಮಿತವಾಗಿ ಸಲಹೆ ನೀಡುತ್ತಿದ್ದಾರೆ.
ಡಾ. ಮೆಹ್ತಾ ಅವರ ಮಾರ್ಗದರ್ಶನದಲ್ಲಿ 27 ವೈದ್ಯರ ತಂಡವು ನಿಯಮಿತವಾಗಿ ವರ್ಚುವಲ್ ಮೋಡ್ ಮೂಲಕ ರೋಗಿಗಳಿಗೆ ಸಲಹೆ ನೀಡುತ್ತಿದೆ.
ಆರೋಗ್ಯ ಭಾರತಿ ಕೋವಿಡ್ -19 ರೋಗಿಗಳಿಗೆ ಸಹಾಯ ಮಾಡಲು ಆಯುಷ್ -64 ಎಂಬ ಆಯುರ್ವೇದ ಔಷಧಿಯನ್ನು ನಿಯಮಿತವಾಗಿ ವಿತರಿಸುತ್ತಿದೆ.
ಮುಂದಿನ ದಿನಗಳಲ್ಲಿ ಈ ಸಂಸ್ಥೆ ಹೆಚ್ಚಿನ ಜನರನ್ನು ತಲುಪಲಿದೆ ಎಂದು ಆರೋಗ್ಯ ಭಾರತಿ ಕಾರ್ಯದರ್ಶಿ ಡಾ.ರಾಜೇಶ್ ತಲ್ವಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.